ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೂ.10 ಲಕ್ಷ ಹಣ ಬಿಡುಗಡೆಗೆ ರೂ.1.5 ಲಕ್ಷ ಲಂಚ: ಇಬ್ಬರು ಅಧಿಕಾರಿಗಳ ಬಂಧನ

ಚೆಕ್ ಡ್ಯಾಮ್ ಕಾಮಗಾರಿ ನಿರ್ವಹಿಸುವ ಲೋಕೋಪಯೋಗಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಗೆ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆ ಮಾಡಲು ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. 
Published on

ಬೆಂಗಳೂರು: ಚೆಕ್ ಡ್ಯಾಮ್ ಕಾಮಗಾರಿ ನಿರ್ವಹಿಸುವ ಲೋಕೋಪಯೋಗಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಗೆ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆ ಮಾಡಲು ರೂ.1.5 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. 

ಜಯನಗರದ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಿಶೋರ್ ಮತ್ತು ಅಕೌಂಟ್ಸ್ ಸೂಪರಿಟೆಂಡೆಂಟ್ ದತ್ತಾತ್ರೇಯ ಬಂಧಿತರಾಗಿದ್ದಾರೆ. 

ವೆಂಕಟೇಶ್ ಎಂಬುವವರು ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರಾಗಿದ್ದಾರೆ. ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ತರುವಾಯ ಸರ್ಕಾರದಿಂದ ರೂ.10 ಲಕ್ಷ ಬಿಡುಗಡೆಯಾಗಬೇಕಿತ್ತು. ಈ ಹಣ ಬಿಡುಗಡೆ ಮಾಡಲು ಬಂಧಿತರು ರೂ.3.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ. ಲಂಚ ನೀಡಲು ಇಷ್ಟವಿಲ್ಲದಿರುವ ಕಾರಣ ಎಸಿಬಿಗೆ ದೂರು ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com