ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ!

ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ. 

ಒಂದು ವರ್ಷದ ಹಿಂದೆ ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಿಂದ ಅಂಕಶೆಟ್ಟಿಪುರ ಗ್ರಾಮದ ರಾಜೇಂದ್ರನೊಂದಿಗೆ ವಿವಾಹವಾಗಿದ್ದ ತ್ರಿವೇಣಿ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ವರದಕ್ಷಿಣೆ ವಿಚಾರವಾಗಿ ತನಗೆ ಪ್ರತಿನಿತ್ಯ ಗಂಡನು ಸೇರಿದಂತೆ ಮನೆಯವರೆಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ನಮ್ಮ ಮಗಳು ತ್ರಿವೇಣಿ ಕೆಲದಿನಗಳ ಹಿಂದೆ ನಮಗೆ ತಿಳಿಸುತ್ತಿದ್ದಳು ಎಂದು ಮನೆಯವರು, ತ್ರಿವೇಣಿಯ ಪತಿ ರಾಜೇಂದ್ರ ಹಾಗೂ ಈತನ ಮನೆಯವರ ವಿರುದ್ದ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತಿ ದಿನ ಹೇಗೆ ನಡೆದುಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಬರೆದುಕೊಂಡಿರುವ ಡೈರಿಯನ್ನು ಹಾಗೂ ಪತಿ ರಾಜೇಂದ್ರನ ಮೊಬೈಲ್ ಅನ್ನು ಗ್ರಾಮಾಂತರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.

ವರದಿ: ಗೂಳಿಪುರ ನಂದೀಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com