ಕೊರೋನಾ ವೈರಸ್: ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ ಸಿಂಪಡಣೆ ವ್ಯವಸ್ಥೆ!

ಎಲ್ಲೆಡೆ ಕೊರೊನಾ ವೈರಸ್ ಭೀತಿಯಿದೆ. ಇದು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು/ ಕೃಷಿಗೆ ಬೇಕಾದ ಬಿತ್ತನೆ ಬೀಜ-ಗೊಬ್ಬರ-ಕೀಟನಾಶಕ- ಯಂತ್ರೋಪಕರಣಗಳ  ಮಾರುಕಟ್ಟೆಗಳನ್ನು ಹೆಚ್ಚುಕಾಲ ಸ್ಥಗಿತಗೊಳಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ದೈನಂದಿನ ಅತ್ಯವಶ್ಯಕ ಆಹಾರ ಪದಾರ್ಥಗಳಿ
ಸೋಂಕು ನಿವಾರಕ ದ್ರಾವಣ ಸಿಂಪಡಣೆ ವ್ಯವಸ್ಥೆ
ಸೋಂಕು ನಿವಾರಕ ದ್ರಾವಣ ಸಿಂಪಡಣೆ ವ್ಯವಸ್ಥೆ

ಬೆಂಗಳೂರು: ಎಲ್ಲೆಡೆ ಕೊರೊನಾ ವೈರಸ್ ಭೀತಿಯಿದೆ. ಇದು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು/ ಕೃಷಿಗೆ ಬೇಕಾದ ಬಿತ್ತನೆ ಬೀಜ-ಗೊಬ್ಬರ-ಕೀಟನಾಶಕ- ಯಂತ್ರೋಪಕರಣಗಳ  ಮಾರುಕಟ್ಟೆಗಳನ್ನು ಹೆಚ್ಚುಕಾಲ ಸ್ಥಗಿತಗೊಳಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ದೈನಂದಿನ ಅತ್ಯವಶ್ಯಕ ಆಹಾರ ಪದಾರ್ಥಗಳಿಗೆ ಭಾರಿ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಈಗ ಚಾಲ್ತಿಯಲ್ಲಿರುವ ಹುಬ್ಬಳ್ಳಿ – ಮೈಸೂರು ಮಾರುಕಟ್ಟೆ ಪ್ರಾಂಗಣಗಳ ಒಳಗೆ ಪ್ರವೇಶಿಸುವವರು ಬ್ಯಾಕ್ಟೀರಿಯಾ – ಫಂಗಿ – ವೈರಸ್ ಸೋಂಕಿನಿಂದ ಮುಕ್ತರಾಗಿ ಒಳ ಪ್ರವೇಶಿಸುವ ರೀತಿ ವ್ಯವಸ್ಥೆ ಮಾಡಿದ್ದಾರೆ. ಮೊದಲು ತಮಿಳುನಾಡಿನ ತಿರುಪ್ಪೂರು ಎಂಬಲ್ಲಿ ಈ ವ್ಯವಸ್ಥೆ  ಆರಂಭವಾಯಿತು. ಸುಮಾರು 16 ಅಡಿ ಉದ್ದಳತೆಯ ಸುರಂಗ ಮಾದರಿ ಸ್ಟೀನ್ ಲೆಸ್ ಸ್ಟೀಲ್ ರಚನೆಯ ಒಳಗೆ ಅವಶ್ಯಕತೆಗೆ ತಕ್ಕಂತೆ ಕುಗ್ಗಿಸಿದ ಸೋಡಿಯಂ ಹೈಪೊಕ್ಲೊರೈಟ್ ದ್ರಾವಣವನ್ನು ತುಂತುರು ತುಂತುರಾಗಿ ಬೀಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಈ ದ್ರಾವಣ  ಸಿಂಪಡಣೆಯಾಗುತ್ತಿರುವಾಗ ಅದರೊಳಗಿಂದ ಜನ ಹಾದು ಹೋಗಬೇಕು. ಇದರೊಳಗಿನ ನಡಿಗೆ ಅತೀ ಶೀಘ್ರದಲ್ಲಿ ಮುಕ್ತಾಯವಾಗುತ್ತದೆ.

ಟನಲ್ ಪ್ರವೇಸಿಸುವ ಮುನ್ನ ಹೊರಗಿರುವ ಸಿಂಕ್ ನಲ್ಲಿ ಸೋಪು ಹಾಕಿ ಕೈಗಳನ್ನು ಚೆನ್ನಾಗಿ ತೊಳೆದಿರಬೇಕು. ಟನಲ್ ಒಳಗೆ ವೇಗವಾಗಿ ಹೋಗದೇ ಎರಡು ಕೈಗಳನ್ನು ಮೇಲೆತ್ತಿ ಹಸ್ತಗಳನ್ನು ಮುಚ್ಚದ ರೀತಿ ನಿಧಾನವಾಗಿ ನಡೆದು ಹೋಗಬೇಕು. ಹೀಗೆ ಹಾದು ಹೋಗುವಾಗ  ಸೋಡಿಂಯಂ ಹೈಪೊಕ್ಲೊರೈಟ್ ದ್ರಾವಣ ಧರಿಸಿದ ಬಟ್ಟೆ ಮತ್ತು ಬಟ್ಟೆ ಮುಚ್ಚಿರದ ಅಂಗಾಂಗಗಳ ಮೇಲೆ ಸಿಂಪಡಣೆಯಾಗುವುದರಿಂದ ಬ್ಯಾಕ್ಟೀರಿಯಾ – ಫಂಗಿ – ವೈರಸ್ ನಾಶವಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.

"ಈಗ ಚಾಲ್ತಿಯಲ್ಲಿರುವ ಸ್ಟೀನ್ ಲೆಸ್ ಸ್ಟೀಲ್ ಮಾದರಿ ಸುರಂಗ, ಸಿಂಪಡಣಾ ವ್ಯವಸ್ಥೆ ದುಬಾರಿ. ಇದನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯವಿದೆ. ಇದಕ್ಕಾಗಿ ಬ್ಯಾಟರಿ ಅಥವಾ ಎಲೆಕ್ಟ್ರಿಕ್ ಚಾಲನೆಯ ಅಗ್ರಿಮೇಟ್ ಸ್ಪ್ರೇಯರ್ ಗಳನ್ನು ಬಳಸಬಹುದು. ಇವುಗಳ ವೆಚ್ಚವೂ ಕಡಿಮೆ. ಈ  ಸ್ಪ್ರೇಯರ್ ಗಳ ಲಾನ್ಸ್ - ನಾಝಲ್‌ಗಳು ಶಕ್ತಿಶಾಲಿಯಾಗಿರುತ್ತವೆ. ಇವುಗಳನ್ನು ಸುರಂಗದ ಮೇಲ್ಭಾಗ ನಾಲ್ಕು ಮೂಲೆಯಲ್ಲೂ ಅಳವಡಿಸಿದರೆ ಸೋಂಕು ನಿವಾರಕ ದ್ರಾವಣ ಸಿಂಪಡಣೆಯಾಗುತ್ತಿರುತ್ತದೆ. ಅಗತ್ಯವಿರುವಾಗ ಆನ್, ಬೇಡದಿದ್ದಾಗ ಆಫ್ ಮಾಡಬಹುದು ಎಂದು ಕೃಷಿಯಂತ್ರ  ತಜ್ಞ ವಾಸುದೇವಮೂರ್ತಿ ಅಭಿಪ್ರಾಯಪಡುತ್ತಾರೆ.

"ಈ ಸ್ಪ್ರೇಯರ್‌ಗಳು ಹಗುರವಾಗಿದ್ದು ಸಾಗಣೆಗೂ ಅನುಕೂಲಕರ. ಹೆವಿ ಡ್ಯೂಟಿಗೂ ಹೇಳಿ ಮಾಡಿಸಿದಂತಿವೆ. ಉತ್ತಮ ಗುಣಮಟ್ಟದಾಗಿದ್ದರೂ ದುಬಾರಿಯಲ್ಲ ಎಂಬ ಅಂಶ ಮುಖ್ಯ. ಈ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು, ರೈಲು – ಬಸ್ ನಿಲ್ದಾಣಗಳನ್ನು ಪ್ರವೇಶಿಸುವ ಮುನ್ನ  ಟನಲ್ ಗಳನ್ನು ನಿರ್ಮಿಸಿ ಅದರ ಮೇಲೆ ಸ್ಪ್ರೇಯರ್ ಗಳನ್ನು ಅಳವಡಿಸಿಸಿದರೆ ಸೋಂಕು ಹರಡುವ ಆತಂಕದಿಂದ ಪಾರಾಗಬಹುದು. ಇಲ್ಲಿ ಸಿಂಪಡಿಸುವ ದ್ರಾವಣವೇ ಮುಖ್ಯ. ಈ ದ್ರಾವಣವನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಉತ್ತಮ ಗುಣಮಟ್ಟವಿರುವ ಅಗ್ರಿಮಾರ್ಟ್ ಸ್ಪ್ರೇಯರ್ -  ಲಾನ್ಸ್ - ನಾಝಲ್ಸ್ ಸಹಾಯಕ ಮಾತ್ರ ಎಂದು ಅವರು ಹೇಳುತ್ತಾರೆ.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರಸ್ತೆಗಳಲ್ಲಿ, ಸೋಂಕು ಸಾಧ್ಯತೆ ಇರುವ ಎಡೆಗಳಲ್ಲಿ ದೊಡ್ಡಮಟ್ಟದಲ್ಲಿ ಸಿಂಪಡಣೆ ಅಗತ್ಯ. ಪ್ಲಾಂಟೇಶನ್ ಬೆಳೆಗಾರರಲ್ಲಿ ವೆಹಿಕಲ್ ಮೋಟಾರ್ ಚಾಲಿತ ಸಿಂಪಡಣಾ ಯಂತ್ರಗಳಿವೆ. ಅವುಗಳನ್ನು ಬಾಡಿಗೆ ಪಡೆದು ಸಿಂಪಡಣೆ ಮಾಡಬಹುದು. ಇದರಿಂದ  ಅಮೂಲ್ಯವಾದ ನೀರಿನ ಉಳಿತಾಯವಾಗುತ್ತದೆ. ಫೈರ್ ಇಂಜಿನ್ ಬಳಸಿದಾಗ ನೀರಿನ ಬಳಕೆ ಹೆಚ್ಚು. ಇದನ್ನು ತಪ್ಪಿಸಬಹುದು ಎಂದವರು ತಿಳಿಸುತ್ತಾರೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಗೆ "ಮ್ಯಾನುವೆಲ್ ಆಪರೇಟೆಡ್ ಕಂಪ್ರೆಸರ್ ಸ್ಪ್ರೇಯರ್ ಮಾದರಿ 200 ಸ್ಪ್ರೇಯರ್  "ಗಳನ್ನು ಉಚಿತವಾಗಿ ನೀಡಿರುವ ಅಗ್ರಿಮಾರ್ಟ್ ಸಂಸ್ಥೆ ಮುಖ್ಯಸ್ಥರು, "ಸರ್ಕಾರ ತಮ್ಮನ್ನು ಸಂಪರ್ಕಿಸಿದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲು ಸಿದ್ಧ” ಎಂದಿದ್ದಾರೆ.

ಹೆಚ್ಚಿನ ಮಾಹಿತಿಗೆ 94483 96890 ಸಂಪರ್ಕಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com