ಕಲಬುರಗಿ: ಮದ್ಯದ ಅಮಲಲ್ಲಿ ಸ್ವಂತ ಮಕ್ಕಳಿಗೇ ವಿಷವಿಕ್ಕಿ ಕೊಂದ ಪಾಪಿ ತಂದೆ!

ಮದ್ಯದ ಅಮಲಲ್ಲಿ ತಂದೆಯೊಬ್ಬತನ್ನ ಸ್ವಂತ ಮಕ್ಕಳಿಗೇ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಡೆದಿದೆ. 
ಕಲಬುರಗಿ: ಮದ್ಯದ ಅಮಲಲ್ಲಿ ಸ್ವಂತ ಮಕ್ಕಳಿಗೇ ವಿಷವಿಕ್ಕಿ ಕೊಂದ ಪಾಪಿ ತಂದೆ!
ಕಲಬುರಗಿ: ಮದ್ಯದ ಅಮಲಲ್ಲಿ ಸ್ವಂತ ಮಕ್ಕಳಿಗೇ ವಿಷವಿಕ್ಕಿ ಕೊಂದ ಪಾಪಿ ತಂದೆ!

ಕಲಬುರಗಿ: ಮದ್ಯದ ಅಮಲಲ್ಲಿ ತಂದೆಯೊಬ್ಬತನ್ನ ಸ್ವಂತ ಮಕ್ಕಳಿಗೇ ವಿಷ ಉಣಿಸಿ ಕೊಂದಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ನಡೆದಿದೆ.

ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ನಡೆದ ಘಟನೆಯಲ್ಲಿ ರೋಹಿತ (4) ಹಾಗೂ ಪರ್ವಿನ್ (3) ಎನ್ನುವ ಇಬ್ಬರು ಮಕ್ಕಳು ಮೃತಪಟ್ಟಿದ್ದು ಈ ಮಕ್ಕಳ ತಂದೆಯಾದ ಸಂಜೀವ್ ಮಕ್ಕಳಿಗೆ ವಿಷ ಉಣಿಸಿ ಕೊಂದಿದ್ದಾನೆ.

ಮದ್ಯದ ಅಮಲಿನಲ್ಲಿದ್ದ ಸಂಜೀವ್ ಮಕ್ಕಳನ್ನು ಜಮೀನಿಗೆ ಕರೆದೊಯ್ದು ಅಲ್ಲಿ ಮಕ್ಕಳಿಗೆ ವೀಷ ಉಣಿಸಿ ಹತ್ಯೆ ಂಆಡಿದ್ದಾನೆ. ಆ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಧ್ಯ ಪೋಲೀಸರು ಆರೋಪಿ ಸಂಜೀವ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಸಂಜೀವ್ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ಪೋಲೀಸರು ಶಂಕಿಸಿದ್ದಾರೆ. ಘಟನೆ ಕುರಿತಂತೆ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com