ಬೆಂಗಳೂರು: ಪ್ರಿಯಕರ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ 25 ವರ್ಷದ ಬೆಂಗಳೂರು ಮೂಲದ ಯುವತಿ
ಕೋಳಿ ಅಂಗಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿ ಮಾರತ್ತಹಳ್ಳಿಯ ಸಂಜಯ್ ನಗರ ನಿವಾಸಿ ಅಶ್ವಿನಿ ಎಂದು ಗುರುತಿಸಲಾಗಿದ್ದು, ಪ್ರಭಾತ್ ಡೈಗ್ನೋಸಿಸ್ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಯಾಗಿದ್ದಾಳೆ.
ಅಶ್ವಿನಿ ತಾನು ಕೆಲಸ ಮಾಡುತ್ತಿದ್ದ ಡೈಗ್ನೋಸಿಸ್ ಲ್ಯಾಬ್ ಮಾಲೀಕ ಪ್ರಭಾಕರ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು. ಸೋಮವಾರ ರಾತ್ರಿ ಅಶ್ವಿನಿ ತನ್ನನ್ನು ಮದುವೆಯಾಗುವಂತೆ ಪ್ರಭಾಕರ್ ಅವರಿಗೆ ಒತ್ತಾಯಿಸಿದ್ದಾರೆ. ಆದರೆ ಮದುವೆಗೆ ಪ್ರಭಾಕರ್ ನಿರಾಕರಿಸಿದ್ದು, ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ನಂತರ ರಾತ್ರಿ ಅಶ್ವಿನಿ ಡಿಯೋ ಬೈಕಿನಲ್ಲಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ. ಪ್ರಯಾಣಿಸಿ ರಾಷ್ಟ್ರೀಯ ಹೆದ್ದಾರಿ 4ರ ಕಳ್ಳಬೆಳ್ಳ ಬಳಿ ಬಂದು ಕೋಳಿ ಅಂಗಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಈ ಸಂಬಂಧ ಬೆಂಗಳೂರಿನ ಕಳ್ಳಬೆಳ್ಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Advertisement