ಬೆಂಗಳೂರು: ಬೆಂಗಳೂರು: ಬೀಗ ಹಾಕಿದ ಮನೆಗಳ ಕಿಟಕಿ, ಹೂವಿನ ಕುಂಡದಲ್ಲಿಟ್ಟ ಕೀ ಎಗರಿಸಿ ಕಳ್ಳತನ ಮಾಡುತ್ತಿದ್ದ ಐನಾತಿ ಜೋಡಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರವೀಣ್ ಆರ್ (23), ಸೂರ್ಯ ಎಂ (19) ಎಂದು ಗುರ್ತಿಸಲಾಗಿದೆ. ಬಂಧಿತರಿಬ್ಬರೂ ಮಾಗಡಿ ರಸ್ತೆಯ ನಿವಾಸಿಗಳಾಗಿದ್ದು, ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ರೂ.6.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಈ ತಿಂಗಳು ಅಕ್ಟೋಬರ್ 6 ರಂದು ಇಬ್ಬರು ಆರೋಪಿಗಳು ಮನೆಗಳ್ಳತನ ಮಾಡಿದ್ದರು. ಮನೆ ಕಿಟಕಿಯಲ್ಲಿಟ್ಟಿದ್ದ ಕೀ ಬಳಸಿ ಈ ಕೃತ್ಯ ಎಸಗುತ್ತಿದ್ದರು. ಈ ಕೆಲಸಕ್ಕೆ ಇಳಿಯುವ ಮುನ್ನ ಕಿಲಾಡಿ ಜೋಡಿ ಪೂರ್ತಿ ಏರಿಯಾ ವಾಚ್ ಮಾಡಿದ್ದರು. ಬಳಿಕ ಬೀಗ ಹಾಕಿದ ಮನೆಗಳ ಸುತ್ತ ಹುಡುಕಾಟ ನಡೆಸಿದ್ದರು. ಕಿಟಕಿ, ಹೂಕುಂಡದಲ್ಲಿ ಇಟ್ಟ ಕೀ ಸಿಕ್ಕರೆ ಕಳ್ಳತನಕ್ಕೆ ಇಳಿಯುತ್ತಿದ್ದರು.
ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು ಇಬ್ಬರನ್ನೂ ಬಂಧನಕ್ಕೊಳಪಡಿಸಿದ್ದಾರೆ.
Advertisement