ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 26-11-2020ರಲ್ಲಿ ಕ್ಯಾಬಿನೆಟ್ ನಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಂಡು ಆದೇಶ ಹೊರಡಿಸಿದೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ಕೊಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಇದೊಂದು ಐತಿಹಾಸಿಕ ನಿರ್ಣಯ ನಮ್ಮ ಸರ್ಕಾರದ್ದು ಈಗ ಅದು ಕೈಗೂಡಿದೆ ಎಂದು ಹೇಳಿದರು.
ಸ್ಲಂಗಳಲ್ಲಿ ವಾಸಿಸುತ್ತಿರುವವರ ಹೆಸರಗಳ ಹಿಂದೆಯೇ ಸ್ಲಂ ಎಂಬ ಸೇರ್ಪಡೆಯಾಗಿದೆ. ಉದಾಹರಣೆಗೆ ಸ್ಲಂ ಶಶಿ, ಸ್ಲಂ ಮಣಿ ಹೀಗೆ ಹಲವಾರು ಹೆಸರುಗಳು ವಾಡಿಕೆಗೆ ಬಂದಿವೆ. ಅಂದರೆ ಅವರ ಇಡೀ ಜೀವಮಾನವನ್ನು ಸ್ಲಂ ಗಳಲ್ಲೇ ಕಳೆದಿದ್ದಾರೆ. ಈಗ ಅವರಿಗೆ ಸಂತಸದ ಸಮಯ ನಮ್ಮ ಸರ್ಕಾರ ಅವರಿಗೆಲ್ಲ ಅನುಕೂಲ ಮಾಡಿಕೊಡಲು ಅವರುಗಳಿಗೆ ಹಕ್ಕುಪತ್ರ ನೀಡುತ್ತಿದೆ ಎಂದರು.
Advertisement