ಬೆಂಗಳೂರು: ಕೊರೋನಾ ಪ್ರಕರಣಗಳ ಏರುಗತಿ ಜಿಕಾ ವೈರಸ್ ಪ್ರಕರಣಗಳ ವರದಿಯ ನಡುವೆಯೂ ಕರ್ನಾಟಕ ಜು.12 ರಿಂದ ಕೇರಳಕ್ಕೆ ಸಾರಿಗೆ ಸೇವೆಗಳನ್ನು ಪುನಾರಂಭ ಮಾಡಿವೆ.
ಕೇರಳ-ಕರ್ನಾಟಕದ ನಡುವೆ ಸಂಚರಿಸುವುದಕ್ಕೆ ಕರ್ನಾಟಕ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪ್ರಯಾಣದ ಸಮಯಕ್ಕಿಂತ 72 ಗಂಟೆಗಳ ಮುನ್ನ ಮಾಡಿಸಿದ ಆರ್ ಟಿ-ಪಿಸಿಆರ್ ಪರೀಕ್ಷೆ ಹಾಗೂ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರುವ ಲಸಿಕೆ ಪ್ರಮಾಣಪತ್ರದೊಂದಿಗೆ ಪ್ರಯಾಣಿಸಬೇಕಾಗುತ್ತದೆ.
ಕೇರಳದಿಂದ ಕರ್ನಾಟಕಕ್ಕೆ ಹೆಚ್ಚು ಸಂಚರಿಸುವ ವಿದ್ಯಾರ್ಥಿಗಳು, ಉದ್ಯಮಿಗಳು ಪ್ರತಿ 15 ದಿನಕ್ಕೊಮ್ಮೆ ಆರ್ ಟಿ-ಪಿಸಿಆರ್ ವರದಿಯನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ.
Advertisement