ಕಲಬುರಗಿ: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬವಾರ್ಡ್ ನ ಕಿಟಕಿಯಿಂದ ಜಿಗಿದು ತಪ್ಪಿಸಿಕೊಂಡಿರುವ ಘಟನೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಿಂದ ವರದಿಯಾಗಿದೆ.
ತಪ್ಪಿಸಿಕೊಂಡ ಚಾರಣಾಧೀನ ಕೈದಿ. ಸಿದ್ದಪ್ಪ ಎನ್ನಲಾಗಿದ್ದು ಈತ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾಗಿ ಸ್ನೇಹಿತನ ಕೊಲೆ ಸಂಬಂಧ ಜೈಲು ಸೇರಿದ್ದನು.
ಕಳೆದ ಕೆಲ ದಿನದಿಂದ ಅಸಹಜ ವರ್ತನೆ ತೀರಿದ್ದ ಸಿದ್ದಪ್ಪನನ್ನು ನಾಲ್ಕು ದಿನಗಳ ಹಿಂದೆ ಜಿಮ್ಸ್ ಆಸತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಅಲ್ಲಿನ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ.
ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Advertisement