ಬಳ್ಳಾರಿ: ಕಚ್ಚಿದ ಹಾವಿನೊಂದಿಗೇ ಆಸ್ಪತ್ರೆಗೆ ಬಂದ ಭೂಪ!

ತನಗೆ ಕಚ್ಚಿದ ಕೋಬ್ರಾ ಹಾವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದಿರುವ ಯುವಕ
ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದಿರುವ ಯುವಕ

ಬಳ್ಳಾರಿ: ತನಗೆ ಕಚ್ಚಿದ ಕೋಬ್ರಾ ಹಾವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ಯುವಕನೇ ಆಸ್ಪತ್ರೆಗೆ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಭೂಪನಾಗಿದ್ದು ಈ ವಿಡಿಯೊ ವೈರಲ್ ಆಗಿದೆ.

ಕಾಡಪ್ಪನಿಗೆ ಹಾವು ಕಚ್ಚಿತ್ತು. ಆಗ ಅದನ್ನು ಹಿಡಿದುಕೊಂಡ. ಕಚ್ಚಿದ ಹಾವಿಗೆ ಔಷಧಿ, ಇಂಜೆಕ್ಷನ್ ಪಡೆಯಲು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವಾಗ ಹಾವನ್ನೂ ಹಿಡಿದುಕೊಂಡು ಹೋದ. ಕಾಡಪ್ಪನ ಕೈಯಲ್ಲಿ ಹಾವನ್ನು ನೋಡಿದ ಜನರು ಹೌಹಾರಿದ್ದಾರೆ.

ಬಳ್ಳಾರಿಯ ವಿಮ್ಸ್ ನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಹಾವನ್ನು ಕಾಡಿಗೆ ಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com