ಬಳ್ಳಾರಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುರುಗೋಡು ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಟಾವಿಗೆ ಬಂದಿದ್ದ ಮೆಣಸಿನಕಾಯಿಗೆ ಸರಿಯಾದ ದಾಸ್ತಾನು ಮಾಡಲು ಸಾಧ್ಯವಾಗದ ಕಾರಣ ಒಂದೇ ರಾತ್ರಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಮೆಣಸಿನಕಾಯಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರೀ ಮಳೆ: ಶಿವಮೊಗ್ಗದಲ್ಲಿ 112 ಹೆಕ್ಟೇರ್ ಬೆಳೆ ನಾಶ
ತಾಲೂಕಿನ ಆಲದಹಳ್ಳಿಯಲ್ಲಿ ಶೈತ್ಯಾಗಾರ ನಿರ್ಮಿಸುವುದಾಗಿ ಈ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇದರಲ್ಲಿ ಯಾವುದೇ ಪ್ರಗತಿಗಳೂ ಕಂಡು ಬಂದಿಲ್ಲ.
ಕೆಂಪು ಮೆಣಸಿನಕಾಯಿಯನ್ನು ತೆರೆದ ಸ್ಥಳಗಳಲ್ಲಿ ಒಣಗಿಸಿದ ನಂತರವೇ ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬಾರಿ ಬಿಸಿಲು ಕಾಣದೆ ಮಳೆಯಿಂದಾಗಿ ಭಾರೀ ಪ್ರಮಾಣ ಮೆಣಸಿನಕಾಯಿ ಹಾನಿಗೊಳಗಾಗುವಂತಾಗಿದೆ.
Advertisement