ವಾರದೊಳಗೆ ಗುಂಡಿಮುಕ್ತ ರಸ್ತೆ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಿಬಿಎಂಪಿ ಭರವಸೆ

ಸೆಪ್ಟೆಂಬರ್ 20ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತ ರಸ್ತೆಯನ್ನು  ಹೊಂದಲಿದೆ ಎಂದು ಬಿಬಿಎಂಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಭರವಸೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೆಪ್ಟೆಂಬರ್ 20ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತ ರಸ್ತೆಯನ್ನು  ಹೊಂದಲಿದೆ ಎಂದು ಬಿಬಿಎಂಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಭರವಸೆ ನೀಡಿದೆ.

ವಿಕಾಸಸೌಧದಲ್ಲಿ ಬಿಬಿಎಂಪಿ, ಬಿಎಂಆರ್‌ಸಿಎಲ್, ಬಿಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಸಂಚಾರ ಪೊಲೀಸ್ ಪ್ರತಿನಿಧಿಗಳೊಂದಿಗೆ ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ, ಹಾನಿಗೊಳಗಾದ ನಗರದ ರಸ್ತೆಗಳನ್ನು ಒಂದು ವಾರದೊಳಗೆ ಸರಿಪಡಿಸಲಾಗುವುದು ಎಂದು ಬಿಬಿಎಂಪಿ ಎಲ್ಲರಿಗೂ ಭರವಸೆ ನೀಡಿದೆ.

ಆಯಾ ವಲಯ ಎಂಜಿನಿಯರ್‌ಗಳು ನಗರದ ಇತರ ರಸ್ತೆಗಳನ್ನು  ನೋಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಗುಂಡಿ-ಮುಕ್ತಗೊಳಿಸುತ್ತಾರೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಹೇಳಿದರು. 

ಬೀದಿ ದೀಪಗಳ ವಿಷಯದಲ್ಲಿ ಸಂಚಾರ ವಿಭಾಗವು ನಗರದ ಕತ್ತಲೆ ಪ್ರದೇಶಗಳನ್ನು ಗುರುತಿಸುತ್ತದೆ ಮತ್ತು ಈ ವಿಚಾರದ ಬಗ್ಗೆ  ಎರಡು ವಾರಗಳ ನಂತರ ಮುಂದಿನ ಸಮನ್ವಯ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ  'ರಾಜ್ಯದ ಭವಿಷ್ಯದ ವಿಷನ್ 2020 ಗಾಗಿ ಪ್ರಸ್ತಾವಿತ ರಸ್ತೆ ನಕ್ಷೆ ಬಗ್ಗೆಯೂ ಚರ್ಚಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com