ಬೆಂಗಳೂರು: ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಹೆಚ್ಚಳ ಸೇರಿದಂತೆ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಭರವಸೆ ನೀಡಿದೆ.
ಕರ್ನಾಟಕ ಮತ್ತು ಇತರ ದಕ್ಷಿಣ ರಾಜ್ಯಗಳ ರೈತ ಮುಖಂಡರ ನಿಯೋಗವು ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿತು.
ಈ ವೇಳೆ ತೋಮರ್ ಅವರು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಎಫ್ಆರ್ಪಿಯು ಕಬ್ಬಿನಿಂದ ಶೇಕಡವಾರು ಸಕ್ಕರೆ ಚೇತರಿಕೆಯನ್ನು ಆಧರಿಸಿರುವುದರಿಂದ ದಕ್ಷಿಣದ ರಾಜ್ಯಗಳ ರೈತರಿಗೆ ಅನ್ಯಾಯವಾಗಿದೆ ಎಂದು ಶಾಂತಕುಮಾರ್ ಅವರು ಹೇಳಿದ್ದಾರೆ.
ಶೇ.10.25 ಸಕ್ಕರೆಯ ಮೂಲ ಚೇತರಿಕೆಯಲ್ಲಿ ಪ್ರತಿ ಟನ್ಗೆ ಎಫ್ಆರ್ಪಿ 305 ರೂ.ಗೆ ನಿಗದಿಪಡಿಸಲಾಗಿದೆ, ಇದನ್ನು ಶೇ.8.5ಕ್ಕೆ ಇಳಿಸಬೇಕಾಗಿದೆ . ಎಫ್ಆರ್ಪಿಯನ್ನು 350 ರೂ.ಗೆ ಹೆಚ್ಚಿಸಬೇಕು ಒತ್ತಾಯಿಸಿದ್ದಾರೆ,
ಕಬ್ಬಿನಿಂದ ಸಕ್ಕರೆ ಮರುಪಡೆಯುವಿಕೆ ಪರೀಕ್ಷೆಯನ್ನು ಕಾರ್ಖಾನೆಗಳು ತಮ್ಮ ಆವರಣದಲ್ಲಿ ನಡೆಸುವುದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ, ಅಂತಹ ಪರೀಕ್ಷೆಗಳನ್ನು ಹೊಲಗಳಲ್ಲಿ ರೈತರ ಮುಂದೆ ನಡೆಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಬ್ಬಿನ ದರ ನಿಗದಿಗೆ ರೈತರ ಆಗ್ರಹ: ಮಂಡ್ಯ ಬಂದ್ ಯಶಸ್ವಿ
ಸಕ್ಕರೆ ನಿಯಂತ್ರಣ ಕಾಯಿದೆ 1966ರ ಪ್ರಕಾರ ಕಬ್ಬು ಪೂರೈಸಿದ 14 ದಿನಗಳೊಳಗೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಹಣವನ್ನು ಪಾವತಿಸಬೇಕು. ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆ ಸಾಲಕ್ಕೆ 20 ತಿಂಗಳ ಮರುಪಾವತಿ ಅವಧಿಯಿಂದ ಸಡಿಲಿಕೆ ನೀಡಬೇಕು. ನಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಸಂಸದರೊಂದಿಗೆ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ತಿಳಿಸಿದರು.
Advertisement