ಬಳಸದ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಿ; ಬೆಂಗಳೂರು ಶಾಸಕರ ನಡುವೆ ಆಸಕ್ತಿಕರ ಚರ್ಚೆ

ರಾಜ್ಯದ ವಿವಿಧ ಕಚೇರಿಗಳ ಮುಂದೆ ನಿಲ್ಲಿಸಿರುವ ಹಳೆಯ ಸರ್ಕಾರಿ ವಾಹನಗಳನ್ನು ವಿಲೇವಾರಿ ಮಾಡುವ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಬೆಂಗಳೂರು ಶಾಸಕರ ನಡುವೆ ಆಸಕ್ತಿದಾಯದ ಚರ್ಚೆ ನಡೆಯಿತು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಳಗಾವಿ: ರಾಜ್ಯದ ವಿವಿಧ ಕಚೇರಿಗಳ ಮುಂದೆ ನಿಲ್ಲಿಸಿರುವ ಹಳೆಯ ಸರ್ಕಾರಿ ವಾಹನಗಳನ್ನು ವಿಲೇವಾರಿ ಮಾಡುವ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಬೆಂಗಳೂರು ಶಾಸಕರ ನಡುವೆ ಆಸಕ್ತಿಕರ ಚರ್ಚೆ ನಡೆಯಿತು. ಈ ಕುರಿತು ಶುಕ್ರವಾರ ಸದನದ ಗಮನ ಸೆಳೆದ ಶಾಸಕ ಬಿ. ಹರ್ಷವರ್ಧನ್, ಕಚೇರಿಗಳ ಮುಂದೆ ಮತ್ತು ರಸ್ತೆ ಬದಿಯಲ್ಲಿ ಬಳಸದ ಸರ್ಕಾರಿ ವಾಹನಗಳನ್ನು ನಿಲ್ಲಿಸುವುದರಿಂದ ವಿಶೇಷವಾಗಿ ನಗರಗಳಲ್ಲಿ ಸ್ಥಳಾವಕಾಶದ ಅಡಚಣೆ ಉಂಟಾಗುತ್ತಿದೆ ಎಂದರು.

ಬಳಸದೆ ನಿಂತಿರುವ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವಂತವುಗಳು ಎಂದು ಘೋಷಿಸಿ, ಮಾರಾಟ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಹಲವಾರು ಸದಸ್ಯರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಅವರಲ್ಲಿ ಕೆಲವರು ಪೊಲೀಸ್ ಠಾಣೆಗಳಲ್ಲಿ ದಾಸ್ತಾನು ಮಾಡಲಾದ ವಾಹನಗಳು ಕೂಡ ದಟ್ಟಣೆಯನ್ನು ಉಂಟುಮಾಡುತ್ತವೆ ಮತ್ತು ಸುಗಮ ವಾಹನ ಸಂಚಾರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಅಂತಹ ವಾಹನಗಳನ್ನು ವಿಲೇವಾರಿ ಮಾಡಲು ನಗರದ ಹೊರವಲಯದಲ್ಲಿ 5-10 ಎಕರೆ ಜಾಗವನ್ನು ಸರ್ಕಾರ ಗುರುತಿಸಬೇಕು ಎಂದು ಒತ್ತಾಯಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಂತಹ ವಾಹನಗಳನ್ನು ಸ್ಕ್ರ್ಯಾಪ್ ಆಗುವ ಮುನ್ನ ಮಾರಾಟ ಮಾಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ಕೇಂದ್ರದ ನೀತಿಗೆ ಅನುಗುಣವಾಗಿ ಸರ್ಕಾರ ಸ್ಕ್ರ್ಯಾಪ್ ನೀತಿಯನ್ನು ರೂಪಿಸುತ್ತಿದೆ. ಆದರೆ, ಬಳಕೆಯಾಗದ ಸರ್ಕಾರಿ ವಾಹನಗಳನ್ನು ಮಾರಾಟ ಮಾಡಲು ನಿಗದಿತ ಕಾರ್ಯವಿಧಾನವಿದ್ದು, ಪೊಲೀಸ್ ಠಾಣೆಗಳ ಮುಂಭಾಗದಲ್ಲಿರುವ ವಾಹನಗಳ ಬಗ್ಗೆ ನ್ಯಾಯಾಲಯವು ನಿರ್ಧರಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com