ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್

ತಿದ್ದುಪಡಿಯಾಗಿರುವ ಭೂ ಕಂದಾಯ ಮಸೂದೆ ಸಣ್ಣ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ: ಕಂದಾಯ ಸಚಿವ

ಅಕ್ರಮವಾಗಿ ಜಮೀನುಗಳಲ್ಲಿ ತೋಟದ ಬೆಳೆಗಳನ್ನು ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ಉದ್ದೇಶ ಹೊಂದಿರುವ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ 2022 ಅನ್ನು ಬುಧವಾರ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.
Published on

ಬೆಳಗಾವಿ: ಅಕ್ರಮವಾಗಿ ಜಮೀನುಗಳಲ್ಲಿ ತೋಟದ ಬೆಳೆಗಳನ್ನು ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ಉದ್ದೇಶ ಹೊಂದಿರುವ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ 2022 ಅನ್ನು ಬುಧವಾರ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.

ಕಾಫಿ, ಅಡಿಕೆ, ರಬ್ಬರ್ ಮತ್ತು ಏಲಕ್ಕಿಯಂತಹ ತೋಟದ ಬೆಳೆಗಳನ್ನು ಬೆಳೆಯಲು ಅಕ್ರಮ ಸಾಗುವಳಿಗೆ ಬಳಸಿಕೊಳ್ಳುವ ಕುಟುಂಬಗಳಿಗೆ 25 ಎಕರೆಗಳಷ್ಟು ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ನೀಡಲು ಮಸೂದೆಯನ್ನು ಯೋಜಿಸಲಾಗಿದೆ. ಯೋಜನೆಗೆ ಕಟ್-ಆಫ್ ದಿನಾಂಕವು ಜನವರಿ 2005 ಆಗಿದ್ದರೆ, ಆ ದಿನಾಂಕದ ಮೊದಲು ಭೂಮಿಯನ್ನು ಹೊಂದಿರುವ ಕುಟುಂಬಗಳು ಅರ್ಹತೆ ಪಡೆದಿರುತ್ತಾರೆ. ಗುತ್ತಿಗೆಗೆ ಸಹಿ ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಭೂಮಿಯನ್ನು ಅವರಿಗೆ ಗುತ್ತಿಗೆ ನೀಡಲಾಗುತ್ತದೆ. ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ ನಂತರ ಸರ್ಕಾರ ಶೀಘ್ರದಲ್ಲೇ ಯೋಜನೆಯನ್ನು ಜಾರಿಗೆ ಬರಲಿದೆ.

ಮುಖ್ಯವಾಗಿ ತೋಟದ ಬೆಳೆಗಳನ್ನು ಬೆಳೆಯುವ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಅರ್ಹ ಫಲಾನುಭವಿಗಳು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಗುತ್ತಿಗೆ ಪಡೆಯಬಹುದಾಗಿದೆ.

ವಿಧೇಯಕ ಮಂಡಿಸಿದ ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಸಣ್ಣ ಜಮೀನು ಹೊಂದಿರುವ ರೆತರಿಗೆ ನೆರವಾಗುವುದು ವಿಧೇಯಕದ ಉದ್ದೇಶವಾಗಿದೆ. ಈ ಯೋಜನೆಯು ಸಣ್ಣ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶವನ್ನು ಹೊಂದಿದೆ ಮತ್ತು ರೆಸಾರ್ಟ್‌ಗಳು ಅಥವಾ ಹೋಂಸ್ಟೇಗಳನ್ನು ಅಭಿವೃದ್ಧಿಪಡಿಸುವಂತಹ ವಾಣಿಜ್ಯ ಶೋಷಣೆಗೆ ಭೂಮಾಲೀಕರಿಗೆ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com