ಬೆಂಗಳೂರು: ಮಳೆಯಿಂದ ಜಲಾವೃತಗೊಂಡ ಮನೆ; ಹೃದಯಾಘಾತದಿಂದ ವೃದ್ಧ ಸಾವು

ಭಾರೀ ಮಳೆಯಿಂದ ಜಲಾವೃತವಾದ ಮನೆಯಲ್ಲಿ ಹೃದಯಾಘಾತದಿಂದ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ. 86 ವರ್ಷದ ಶ್ರೀನಿವಾಸ ರಾಮರಾವ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. 
ನೀರಿನಲ್ಲಿ ಶ್ರೀನಿವಾಸ ರಾಮ ರಾವ್ ಅವರನ್ನು ಹೊತ್ತೊಯ್ಯುತ್ತಿರುವ ಕುಟುಂಬಸ್ಥರು
ನೀರಿನಲ್ಲಿ ಶ್ರೀನಿವಾಸ ರಾಮ ರಾವ್ ಅವರನ್ನು ಹೊತ್ತೊಯ್ಯುತ್ತಿರುವ ಕುಟುಂಬಸ್ಥರು

ಬೆಂಗಳೂರು: ಭಾರೀ ಮಳೆಯಿಂದ ಜಲಾವೃತವಾದ ಮನೆಯಲ್ಲಿ ಹೃದಯಾಘಾತದಿಂದ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ. 86 ವರ್ಷದ ಶ್ರೀನಿವಾಸ ರಾಮರಾವ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. 

ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ  ರೈನ್ ಬೋ  ಬಡಾವಣೆಗೆ  ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಹಾಗೂ ಒಳ ಹೋಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 
ಜಲಾವೃತಗೊಂಡ ಮನೆಯಿಂದ ಶ್ರೀನಿವಾಸ ರಾಮರಾವ್ ಅವರನ್ನು  ಕುಟುಂಬಸ್ಥರು ತುರ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ರೈನ್ ಬೋ ಲೇಔಟ್ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಬರಲಿದೆ. ಇಡೀ ಬಡಾವಣೆ ಐಟಿ ಕಾರಿಡಾರ್ ಆಗಿದ್ದು, ಅರವಿಂದ ಲಿಂಬಾವಳಿ 2008ರಿಂದಲೂ  ಶಾಸಕರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com