2ಎ ಮೀಸಲಾತಿಗೆ ಆಗ್ರಹ: ಬೃಹತ್ ಪ್ರತಿಭಟನೆಗೆ ಪಂಚಮಸಾಲಿ ಸಜ್ಜು
2ಎ ಮೀಸಲಾತಿಗೆ ಒತ್ತಾಯಿಸಿ ಡಿ.12ರಂದು ವಿಧಾನಸೌಧದ ಎದುರು 25 ಲಕ್ಷ ಜನರಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಪಂಚಮಸಾಲಿಗಳು, ಪ್ರತಿಭಟನೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸುತ್ತಿದೆ.
Published: 19th November 2022 11:18 AM | Last Updated: 19th November 2022 11:18 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2ಎ ಮೀಸಲಾತಿಗೆ ಒತ್ತಾಯಿಸಿ ಡಿ.12ರಂದು ವಿಧಾನಸೌಧದ ಎದುರು 25 ಲಕ್ಷ ಜನರಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಪಂಚಮಸಾಲಿಗಳು, ಪ್ರತಿಭಟನೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸುತ್ತಿದೆ.
ಪ್ರತಿಭಟನೆಯಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ಕಾರಣ ಪ್ರತಿಭಟನೆಗೆ ಬೆಂಗಳೂರಿನ ಅರಮನೆ ಮೈದಾನಕ್ಕಿಂತ ದೊಡ್ಡ ಸ್ಥಳವನ್ನು ಹುಡುಕಲು ಸಮುದಾಯದ ಮುಖಂಡರು ಚಿಂತನೆ ನಡೆಸಿದ್ದಾರೆ.
ಬೆಳಗಾವಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರದ ಬೆಂಬಲಿಗರನ್ನು ಪ್ರೇರೇಪಿಸಲು ಪಂಚಮಸಾಲಿ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಶುಕ್ರವಾರ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದರು.
ಇದನ್ನೂ ಓದಿ: 2ಎ ಮೀಸಲಾತಿಗೆ ಆಗ್ರಹ: 'ಚಲೋ ಬೆಂಗಳೂರು'ಗೆ ಸಿದ್ಧರಾಗುವಂತೆ ಜಯ ಮೃತ್ಯುಂಜಯ ಶ್ರೀಗಳು ಕರೆ
ರಾಜ್ಯದಲ್ಲಿ ಚುನಾವಣೆ ಆರಂಭವಾಗುವುದಕ್ಕೂ ಮುನ್ನವೇ ತಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿಗಳು ಆಗ್ರಹಿಸುತ್ತಿದ್ದಾರೆ.
ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, ಲಿಂಗಾಯತ ಪ್ರಮುಖ ನಾಯಕರು ಕಾಂಗ್ರೆಸ್ನತ್ತ ವಾಲುತ್ತಿರುವುದನ್ನು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈ ಚಳವಳಿಗಳಲ್ಲಿ ಯಡಿಯೂರಪ್ಪನವರ ನೆರಳನ್ನು ನಿರ್ಲಕ್ಷಿಸಬಾರದು. ಯು.ಬಿ.ಬಣಕಾರ ಅವರು ಇತ್ತೀಚೆಗೆ ಬಿಜೆಪಿಯ ಎಲ್ಲಾ ಹುದ್ದೆಗಳನ್ನು ತೊರೆದು ಕಾಂಗ್ರೆಸ್ಗೆ ಸೇರಿ ಹಿರೇಕೆರೂರಿನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಯಲ್ಲಾಪುರದಿಂದ ವಿಎಲ್ ಪಾಟೀಲ್ ಕೂಡ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ರಾಜು ಕಾಗೆ ಈಗಾಗಲೇ ಮಂಡಳಿಯಲ್ಲಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಮೌನವಹಿಸಿರುವುದು ಪ್ರತಿಭಟನೆಗೆ ನಾಯಕರ ಆಶೀರ್ವಾದವಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.