'ಇದು ಸಾರ್ವಜನಿಕ ಆಸ್ತಿ, ಆಯುಕ್ತರದ್ದಲ್ಲ'; ಬಿಡಿಎಗೆ ಛೀಮಾರಿ ಹಾಕಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ

ಬಿಡಿಎಯಿಂದ ಅಕ್ರಮವಾಗಿ ಪರ್ಯಾಯ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ (ಐ) ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಡಿಎಯಿಂದ ಅಕ್ರಮವಾಗಿ ಪರ್ಯಾಯ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ (ಐ) ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿದೆ. 

ಬಿಡಿಎ ದೇಶದ ಕಾನೂನು ಅನುಸರಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಅಬ್ದುಲ್ ಎಸ್ ನಜೀರ್ ಬಿಡಿಎ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವಿಚಾರವಾಗಿ 45 ದಿನಗಳ ಹಿಂದೆ ಬಿಡಿಎ ಮಾಜಿ ಆಯುಕ್ತ ರಾಜೇಶ್ ಗೌಡ ಅವರನ್ನು ಕೋರ್ಟ್ ವಜಾಗೊಳಿಸಿತ್ತು.

ಕಾರ್ಯದರ್ಶಿ ಸಿ.ಎಲ್.ಆನಂದ ಮತ್ತು ಉಪ ಕಾರ್ಯದರ್ಶಿ ಡಾ.ಎನ್.ಎನ್.ಮಧು ಅವರ ಹೆಸರನ್ನು ಹೇಳದೆ ನ್ಯಾಯಮೂರ್ತಿ ನಜೀರ್, 'ಅಕ್ರಮಕ್ಕೆ ಆಯುಕ್ತರ ಜೊತೆಗೆ ಅವರೂ ಸಮಾನ ಹೊಣೆಗಾರರು. ದಯವಿಟ್ಟು ಅವರನ್ನು ತಕ್ಷಣ ವರ್ಗಾಯಿಸಿ'ಎಂದರು. 

ಗೃಹ ಸಚಿವ ಆರಗ ಜ್ಞಾನೇಂದ್ರ, ಕಲಬುರಗಿ ಮಾಜಿ ಸಂಸದ ಬಸವರಾಜ ಗಣಪತರಾವ್ ಪಾಟೀಲ್ ಸೇಡಂ, ಬಾಗಲಕೋಟೆ ಶಾಸಕ ವೀರಭದ್ರಯ್ಯ ಚರಂತಿಮಠ, ಕೆಪಿಎಸ್‌ಸಿ ಮಾಜಿ ಸದಸ್ಯ ಎಂ.ನಾಗರಾಜ್ ಸೇರಿದಂತೆ ಆರು ಮಂದಿಗೆ ಪರ್ಯಾಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಈ ನಿರ್ಧಾರಕ್ಕೆ ಬರಲಾಗಿದೆ.

50x80 ಚದರ ಅಡಿ ಅಳತೆಯ ನಿವೇಶನಗಳನ್ನು ನವೆಂಬರ್ 2021 ರ ನಂತರ ಐಷಾರಾಮಿ RMV ಎರಡನೇ ಹಂತದಲ್ಲಿ ಕಡಿಮೆ ಮಾರ್ಗದರ್ಶನ ಮೌಲ್ಯವನ್ನು ಹೊಂದಿರುವ ಪ್ರದೇಶಗಳಲ್ಲಿ ಮೂಲತಃ ಹಂಚಲಾದ ಸೈಟ್‌ಗಳಿಗೆ ಪರ್ಯಾಯವಾಗಿ ಹಂಚಲಾಯಿತು. ಇದರಿಂದ ಬಿಡಿಎಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. “ನೀವು ಕರ್ನಾಟಕದ ಆರು ಪ್ರಮುಖ ವ್ಯಕ್ತಿಗಳ ಪರವಾಗಿ ಮಾರಾಟ ಪತ್ರಗಳನ್ನು ಕಾರ್ಯಗತಗೊಳಿಸಿದ್ದೀರಿ. ಈಗ, ನೀವು ಆ ಸೈಟ್‌ಗಳನ್ನು ಹಿಂಪಡೆಯಬೇಕು. ಆ ಸೈಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಧಾನ ಯಾವುದು ಎಂದು ನ್ಯಾಯಮೂರ್ತಿ ನಜೀರ್ ಬಿಡಿಎ ಪರ ವಕೀಲ ಎಸ್.ಕೆ.ಕುಲಕರ್ಣಿ ಅವರಿಗೆ ಕೇಳಿದರು. 

ಬಿಡಿಎ ಅಧಿಕಾರಿಗಳು ಮತ್ತು ಪಕ್ಷದವರು ಒಟ್ಟಿಗೆ ಕುಳಿತು ಅದನ್ನು ರದ್ದುಗೊಳಿಸಬೇಕಾಗಿದೆ ಎಂದು ವಕೀಲರು ಹೇಳಿದರು. "ಇದು ಸಾರ್ವಜನಿಕ ಆಸ್ತಿ, ಆಯುಕ್ತರ ಆಸ್ತಿಯಲ್ಲ" ಎಂದು ನ್ಯಾಯಾಧೀಶರು ಛೀಮಾರಿ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com