ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು ಮಳೆ: ಐಟಿ ಸಿಟಿ ಬಂಡವಾಳ ಬಹಿರಂಗಪಡಿಸಿದ ದಾಖಲೆ ಮಳೆ; ಜಲಾವೃತಗೊಂಡ ಮನೆಯಲ್ಲಿ ಸಿಲುಕಿ ವೃದ್ಧ ಸಾವು

ಸಿಲಿಕಾನ್ ಸಿಟಿ ಬೆಂಗಳೂರಿನ ಬಣ್ಣವನ್ನು ದಾಖಲೆಯ ಮಳೆ ಬಹಿರಂಗಪಡಿಸಿದೆ. ಪ್ರವಾಹದಿಂದ ಜಲಾವೃತಗೊಂಡಿರುವ ರಸ್ತೆಗಳಲ್ಲಿ ತಾಳ್ಮೆಯಿಂದ ಓಡಾಡುವಂತಾಗಿದೆ. ಇನ್ನು ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿದ್ದ 86 ವರ್ಷದ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
Published on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಬಣ್ಣವನ್ನು ದಾಖಲೆಯ ಮಳೆ ಬಹಿರಂಗಪಡಿಸಿದೆ. ಪ್ರವಾಹದಿಂದ ಜಲಾವೃತಗೊಂಡಿರುವ ರಸ್ತೆಗಳಲ್ಲಿ ತಾಳ್ಮೆಯಿಂದ ಓಡಾಡುವಂತಾಗಿದೆ. ಇನ್ನು ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿದ್ದ 86 ವರ್ಷದ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ದಾಖಲೆಯ ಮಳೆಯು ಬೆಂಗಳೂರು ನಗರವನ್ನು ಮಂಡಿಯೂರುವಂತೆ ಮಾಡಿದೆ. ಐಟಿ ರಾಜಧಾನಿ ಮತ್ತು ಅದರ ಕಾರಿಡಾರ್ ಮಹದೇವಪುರದ ರಸ್ತೆಗುಂಡಿಗಳ ಸಮಸ್ಯೆಯನ್ನು ಬಹಿರಂಗಪಡಿಸಿದೆ.

ಹಾಲನಾಯಕನಹಳ್ಳಿ ಕೆರೆ ಕೋಡಿ ಹರಿದಿದ್ದರಿಂದ ಬಡಾವಣೆ ಜಲಾವೃತಗೊಂಡ ಪರಿಣಾಮ 300 ಮನೆಗಳು ಜಲಾವೃತಗೊಂಡಿದ್ದು ನಾಲ್ಕು ಅಡಿಯಷ್ಟು ನೀರು ನಿಂತಿದೆ. ಹಿರಿಯ ನಾಗರಿಕರೊಬ್ಬರು ತಮ್ಮ ಮನೆಗೆ ನೀರು ನುಗ್ಗಿದ್ದರಿಂದ ಹೃದಯಾಘಾತದಿಂದ ಸಾವನ್ನಪ್ಪಿದ ವರದಿಯೂ ಇವೆ. ಆದರೆ, ಬಾತ್‌ರೂಮ್‌ನಲ್ಲಿ ಜಾರಿಬಿದ್ದು ಆತ ಸಾವನ್ನಪ್ಪಿದ್ದು ವೃದ್ಧ ಕೊಮೊರ್ಬಿಡ್ ರೋಗಿ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿಯನ್ನು ಶ್ರೀನಿವಾಸ ರಾಮರಾವ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ 10:30ರ ಸುಮಾರಿಗೆ ಘಟನೆ ನಡೆದಿದೆ ಎಂದು ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಎಇಇ), ಮಾರ್ಕಂಡೇಯ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸ್ನಾನಗೃಹದಲ್ಲಿ ಜಾರಿಬಿದ್ದಿದ್ದು ಅವರನ್ನು ಪ್ರವಾಹದ ರಸ್ತೆಯಲ್ಲೇ ಹೊರಗೆ ಕರೆದೊಯ್ಯಲಾಗಿತ್ತು. ಇದಕ್ಕಾಗಿ BBMP ದೋಣಿ ವ್ಯವಸ್ಥೆಯನ್ನು ಮಾಡಿತ್ತು. ನಂತರ ಅವರನ್ನು ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು  AEE ಹೇಳಿದರು.

ಈ ಬಡಾವಣೆಯು 25 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು. ಹಾಲನಾಯಕನಹಳ್ಳಿ ಕೆರೆಯ ಜೌಗು ಪ್ರದೇಶವಾಗಿದ್ದು, ಆಗಸ್ಟ್‌ನಲ್ಲಿ ನಗರದಲ್ಲಿ 350 ಮಿ.ಮೀ.ಗೂ ಅಧಿಕ ಮಳೆಯಾಗಿರುವುದರಿಂದ ಕೆರೆಗಳು ಗರಿಷ್ಠ ಸಾಮರ್ಥ್ಯವನ್ನು ತಲುಪಿ ಪ್ರವಾಹಕ್ಕೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ನಿನ್ನೆ ಸಂಜೆ ಮತ್ತು ಮಧ್ಯರಾತ್ರಿ ನಿರಂತರ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಸಿಎಂ ಬೊಮ್ಮಾಯಿ ಬುಧವಾರ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಂದು ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಭಾರಿ ಹಾನಿಯಾಗಿದ್ದು, ಸಮಸ್ಯಾತ್ಮಕ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

'ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಓಆರ್‌ಆರ್‌ ರಸ್ತೆ ನಿವಾಸಿಗಳಿಗೆ ತೊಂದರೆಯಾಗಿದೆ. ಮಹದೇವಪುರ ವಲಯದ ಒಂಬತ್ತು ಸ್ಥಳಗಳು ಮತ್ತು ಬೊಮ್ಮನಹಳ್ಳಿ ವಲಯದ 11 ಪ್ರದೇಶಗಳು ಕೆಟ್ಟ ಪರಿಸ್ಥಿತಿ ಎದುರಿಸುತ್ತಿವೆ. ಒಆರ್‌ಆರ್ ರಸ್ತೆಯಲ್ಲಿ ಮುಖ್ಯ ಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ನೀರು ಸರಾಗವಾಗಿ ಹರಿದು ಹೋಗಲು ಪೈಪ್‌ಲೈನ್‌ ಅಳವಡಿಸಿ ಒಆರ್‌ಆರ್‌ ರಸ್ತೆಯಲ್ಲಿ ನಿಂತ ನೀರನ್ನು ಹೊರಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದರು.

ನೈಸರ್ಗಿಕವಾಗಿ ಹರಿಯುವ ನೀರಿನ ಅಡೆತಡೆಗಳನ್ನು ತೆರವುಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದೇ ವೇಳೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕಂದಾಯ ಸಚಿವ ಆರ್.ಅಶೋಕ ಸಿದ್ಧತೆ ನಡೆಸುತ್ತಿದ್ದಾರೆ.

ಏತನ್ಮಧ್ಯೆ, ಸ್ವಲ್ಪಮಟ್ಟಿಗೆ ನೀರು ಇಳಿಮುಖವಾಗುತ್ತಿರುವುದರಿಂದ ರೈನ್ ಬೋ ಡ್ರೈವ್ ಲೇಔಟ್‌ನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನಾಲ್ಕೂವರೆ ಅಡಿಯಷ್ಟು ನಿಂತಿದ್ದ ನೀರು ಈಗ ಒಂದು ಅಡಿಗಿಂತ ಕಡಿಮೆ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com