ಅಪಾರ್ಟ್ ಮೆಂಟ್ ಮಾಲೀಕರ ಮನವಿ: ಬಿಬಿಎಂಪಿ ಒತ್ತುವರಿ ತೆರವು ಪ್ರಕ್ರಿಯೆಗೆ ಹೈಕೋರ್ಟ್ ತಡೆ!

ಬೆಂಗಳೂರು ಭಾರಿ ಮಳೆ, ಪ್ರವಾಹದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ ಒತ್ತುವರಿ ತೆರವು ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ಬಿಬಿಎಂಪಿಯಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ
ಬಿಬಿಎಂಪಿಯಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ
Updated on

ಬೆಂಗಳೂರು: ಬೆಂಗಳೂರು ಭಾರಿ ಮಳೆ, ಪ್ರವಾಹದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ ಒತ್ತುವರಿ ತೆರವು ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.

ಮಾಲೀಕರ ಅಸೋಸಿಯೇಷನ್ ​​ಸದಸ್ಯರ ಅತಿಕ್ರಮಣ ಕುರಿತು ಬಿಬಿಎಂಪಿ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ ಪೂರ್ವ ಪಾರ್ಕ್‌ರಿಡ್ಜ್ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನೋಟಿಸ್ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಂತೆಯೇ ವಿಚಾರಣೆಯನ್ನು ಮುಂದೂಡಿದೆ.

ಸೆಪ್ಟೆಂಬರ್ 14, 2022 ರ ಒತ್ತುವರಿ ತೆರವು ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ ನಂತರ ನ್ಯಾಯಮೂರ್ತಿ ಆರ್ ದೇವದಾಸ್ ಈ ಆದೇಶವನ್ನು ನೀಡಿದರು. ಮಾಲೀಕರ ಸಂಘವನ್ನು ಪ್ರತಿನಿಧಿಸಿದ ಹಿರಿಯ ವಕೀಲರು, ಒತ್ತುವರಿದಾರರನ್ನು ತೆರವು ಮಾಡಲು ಮತ್ತು ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಕ್ರಮವು ಈಗಾಗಲೇ ಆಗಿದೆ ಎಂದರು.

ಅರ್ಜಿದಾರರ-ಅಸೋಸಿಯೇಷನ್, ಮಹದೇವಪುರ, ಬೆಂಗಳೂರು ಪೂರ್ವವನ್ನು ಪ್ರತಿನಿಧಿಸುವ ಹಿರಿಯ ವಕೀಲರು, ಬಿಬಿಎಂಪಿಯ ಕಡೆಯಿಂದ ಅನಿಯಂತ್ರಿತ ಕ್ರಮದ ವಿರುದ್ಧ ವಾದಿಸಿದರು. ಒತ್ತುವರಿದಾರರನ್ನು ತೆರವುಗೊಳಿಸಲು ಮತ್ತು ಕಟ್ಟಡಗಳನ್ನು ಕೆಡವಲು ಕೋರಿ ಈಗಾಗಲೇ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಮತ್ತು ನ್ಯಾಯಾಲಯದಿಂದ ವಿವಿಧ ತಡೆಯಾಜ್ಞೆಗಳನ್ನು ನೀಡಲಾಗಿದೆ. ಈ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ಹೇಳಲು ಅರ್ಜಿದಾರ-ಅಸೋಸಿಯೇಷನ್‌ಗೆ ಯಾವುದೇ ಸಮಂಜಸವಾದ ಸಮಯವನ್ನು ನೀಡಲಾಗಿಲ್ಲ ಎಂದು ಅವರು ವಾದಿಸಿದರು. 

ನಂತರ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಜಾರಿಗೊಳಿಸಿತು ಮತ್ತು ಇದೇ ರೀತಿಯ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ಮುಂದಿನ ವಿಚಾರಣೆಗಾಗಿ ಈ ಅರ್ಜಿಯನ್ನು ಅವುಗಳ ಜೊತೆಗೆ ಪಟ್ಟಿ ಮಾಡಲು ನೋಂದಾವಣೆಗೆ ನ್ಯಾಯಪೀಠ ನಿರ್ದೇಶಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com