ಬೆಂಗಳೂರು: ಬೆಂಗಳೂರಿನಲ್ಲಿ ಏಪ್ರಿಲ್ 11ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಜಿಲ್ ಆ್ಯಪ್ನಲ್ಲಿ 460 ದೂರುಗಳನ್ನು ದಾಖಲಾಗಿವೆ. ಅಲ್ಲದೆ, ಮಂಗಳವಾರದವರೆಗೆ 1,018 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಮಾದಕ ವಸ್ತುಗಳು, ಮದ್ಯ, ಅಮೂಲ್ಯ ಲೋಹಗಳು ಮತ್ತು ಇತರ ಉಡುಗೊರೆಗಳು ಸೇರಿದಂತೆ 51 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ 24 ಗಂಟೆಗಳ ಸಹಾಯವಾಣಿ ಸೇವೆಯನ್ನು ತೆರೆಯಲಾಗಿದೆ. 460 ದೂರುಗಳಲ್ಲಿ 389 ಅಸಲಿ ಎಂದು ಚುನಾವಣಾಧಿಕಾರಿಗಳು ಗುರುತಿಸಿದ್ದಾರೆ.
ಬೆಂಗಳೂರು ಡಿಇಒ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಿಡುಗಡೆ ಮಾಡಿದ ದೈನಂದಿನ ಬುಲೆಟಿನ್ ಪ್ರಕಾರ, ಸೆಂಟ್ರಲ್ ಬೆಂಗಳೂರಿನಿಂದ (309) ಅತಿ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಆರ್ಡಬ್ಲ್ಯುಎ ಸದಸ್ಯೆ ಪೂರ್ಣಿಮಾ ಶೆಟ್ಟಿ ಮಾತನಾಡಿ, ಸಿ-ವಿಜಿಲ್ ಆ್ಯಪ್ ಬಗ್ಗೆ ಅನೇಕ ನಾಗರಿಕರು ಕುತೂಹಲ ಹೊಂದಿದ್ದಾರೆ. ದೂರುದಾರರ ಗುರುತು ಅನಾಮಧೇಯವಾಗಿ ಉಳಿಯುವುದರಿಂದ, ಅವರು ತಮ್ಮ ದೂರುಗಳನ್ನು ದಾಖಲಿಸಲು ಹೆಚ್ಚು ಪ್ರೇರೇಪಿಸಲ್ಪಡುತ್ತಾರೆ. ಆದಾಗ್ಯೂ, ಜನರಿಗೆ ಈ ಅಪ್ಲಿಕೇಶನ್ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ದೂರು ಸಲ್ಲಿಸಬೇಕು ಎಂದು ಅವರು ಹೇಳಿದರು.
ಸಿ-ವಿಜಿಲ್ ಆ್ಯಪ್ನೊಂದಿಗೆ ಇಡೀ ರಾಜ್ಯವನ್ನು ವರ್ಚುವಲ್ ಭೌಗೋಳಿಕ ಗಡಿಯನ್ನಾಗಿ (ಜಿಯೋ ಫೆನ್ಸ್) ಮಾಡಲಾಗಿದೆ. ಯಾವುದೇ ವ್ಯಕ್ತಿಯು ಫೋಟೊಗಳು, ವಿಡಿಯೋಗಳು ಮತ್ತು ಆಡಿಯೊ ಕ್ಲಿಪ್ಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ದೂರುಗಳನ್ನು ನೋಂದಾಯಿಸಿಕೊಳ್ಳುತ್ತಾರೆ ಮತ್ತು ಅವರ ಗುರುತುಗಳನ್ನು ರಕ್ಷಿಸಲಾಗುತ್ತದೆ ಎಂದು ಜಿಲ್ಲಾ ದೂರು ನಿಗಾ ಘಟಕದ ನೋಡಲ್ ಅಧಿಕಾರಿ ಪ್ರತೀಕ್ ಬಯಾಲ್ ವಿವರಿಸಿದರು.
ದೂರು ದಾಖಲಾದ 100 ನಿಮಿಷಗಳಲ್ಲಿ ಕ್ರಮ ಕೈಗೊಂಡು ದೂರನ್ನು ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಕರಪತ್ರಗಳು, ಹಣ, ಪೋಸ್ಟರ್ಗಳು ಅಥವಾ ಇತರ ವಸ್ತುಗಳನ್ನು ವಿತರಿಸುವ ದೂರುಗಳನ್ನು ಪೋರ್ಟಲ್ನಲ್ಲಿ ನೋಂದಾಯಿಸಬಹುದು. ನಾಗರಿಕರು ಹೆಚ್ಚು ಜಾಗೃತರಾಗಿ ಪೋರ್ಟಲ್ನಲ್ಲಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
Advertisement