ವೃದ್ಧ ದಂಪತಿಗೆ ಅನಾನುಕೂಲ: 1.48 ಲಕ್ಷ ರೂಪಾಯಿ ಪರಿಹಾರ ನೀಡಲು ಏರ್ ಇಂಡಿಯಾ, ಮೇಕ್ ಮೈ ಟ್ರಿಪ್ ಗೆ ಕೋರ್ಟ್ ಆದೇಶ 

ವಿಮಾನ ತಡವಾಗಿದ್ದರ ಪರಿಣಾಮ ವೃದ್ಧ ದಂಪತಿಯ ಆಫ್ರಿಕನ್ ಸಫಾರಿ ರಜೆ ಯೋಜನೆ ವಿಫಲಗೊಂಡಿದ್ದಕ್ಕಾಗಿ ಆ ದಂಪತಿಗೆ ಏರ್ ಇಂಡಿಯಾ, ಮೇಕ್ ಮೈ ಟ್ರಿಪ್ ಗೆ 1.48 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೆಂಗಳೂರಿನ ಗ್ರಾಹಕ ಕೋರ್ಟ್ ತೀರ್ಪು ನೀಡಿದೆ. 
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಮಾನ ತಡವಾಗಿದ್ದರ ಪರಿಣಾಮ ವೃದ್ಧ ದಂಪತಿಯ ಆಫ್ರಿಕನ್ ಸಫಾರಿ ರಜೆ ಯೋಜನೆ ವಿಫಲಗೊಂಡಿದ್ದಕ್ಕಾಗಿ ಆ ದಂಪತಿಗೆ ಏರ್ ಇಂಡಿಯಾ, ಮೇಕ್ ಮೈ ಟ್ರಿಪ್ ಗೆ 1.48 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೆಂಗಳೂರಿನ ಗ್ರಾಹಕ ಕೋರ್ಟ್ ತೀರ್ಪು ನೀಡಿದೆ. 

ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಸ್ ರಾಮಭದ್ರನ್ (76) ಹಾಗೂ ಅವರ ಪತ್ನಿ ಆರ್ ವತ್ಸಲ (75) ಅವರು ಕಿಲಿಮಂಜಾರೋಗೆ 2019 ರ ಡಿ.19 ರಂದು ತೆರಳಲು ಯೋಜನೆ ರೂಪಿಸಿದ್ದರು. ತಮಗಾದ ಸಮಸ್ಯೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಮಭದ್ರನ್ ಹೇಳುವುದು ಹೀಗೆ...

"ಪ್ರಯಾಣಕ್ಕಾಗಿ ನಾವು ಬೆಂಗಳೂರಿನಿಂದ ದೆಹಲಿಗೆ ಮೇಕ್ ಮೈ ಟ್ರಿಪ್ ವೆಬ್ ಸೈಟ್ ಮೂಲಕ ಏರ್ ಇಂಡಿಯಾ ವಿಮಾನದ ಟಿಕೆಟ್ ನ್ನು ಕಾಯ್ದಿರಿಸಿದ್ದೆವು, ಅದು 10 ದಿನಗಳ ಪ್ರವಾಸವಾಗಿತ್ತು ಹಾಗೂ ಅಮೇರಿಕಾದಿಂದ ನನ್ನ ಮಗಳು ಹಾಗೂ ಮೊಮ್ಮಕ್ಕಳು ನೇರವಾಗಿ ಆಫ್ರಿಕಾದಲ್ಲಿ ನಮ್ಮ ಜೊತೆಯಾಗಲಿದ್ದರು.

ಆದರೆ ತಾವು ತೆರಳಬೇಕಿದ್ದ ವಿಮಾನ ಬರೊಬ್ಬರಿ 1 ಗಂಟೆ 45 ನಿಮಿಷ ವಿಳಂಬವಾಗಿತ್ತು. ದೆಹಲಿಗೆ ನಾವು ತಲುಪುವ ವೇಳೆಗೆ ಅಂತಾರಾಷ್ಟ್ರೀಯ ವಿಮಾನ ಸಿಬ್ಬಂದಿ ಬೋರ್ಡಿಂಗ್ ಗೇಟ್‌ಗಳನ್ನು ಮುಚ್ಚಲಾಗಿದೆ ಮತ್ತು ನಮ್ಮ ಪೂರ್ವ-ಪರಿಶೀಲಿಸಲಾದ ಲಗೇಜ್‌ಗಳನ್ನು ಡಿಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದರು. ಪರಿಣಾಮ ಆಫ್ರಿಕಾಗೆ ತೆರಳಲು ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದ್ದ ನಾವು ದೆಹಲಿಯಲ್ಲಿ 4 ಡಿಗ್ರಿಯ ಚಳಿಯಲ್ಲಿ ಸತತ 4 ಗಂಟೆಗಳ ಕಾಲ ನಲುಗಬೇಕಾಗಿ ಬಂದಿತ್ತು. ನಾನು ಮಧುಮೇಹದಿಂದ ಬಳಲುತ್ತಿದ್ದೇನೆ. ನಮಗೆ ಯಾವುದೇ ಉಪಹಾರ ಅಥವಾ ಬೆಂಬಲವನ್ನು ನೀಡಲಾಗಿಲ್ಲ ಎಂದೂ ರಾಮಭದ್ರನ್ ಆರೋಪಿಸಿದ್ದಾರೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಟ್ಟು, ನಮಗೆ ನಿಲ್ದಾಣದ ಒಳಗೆ ವಿಶ್ರಾಂತಿ ಕೊಠಡಿಯನ್ನು ಬಳಕೆ ಮಾಡಲು ಬಿಡಲಿಲ್ಲ.  ಬಳಸಲಾಗುವುದಿಲ್ಲ ಮತ್ತು ಹೊರಗಿನದ್ದನ್ನು ಬಳಸಲು ಸುತ್ತುವರೆದು ತೆರಳಬೇಕಾಯಿತು ಎಂದು ಹೇಳಿದ್ದಾರೆ.  

ಮರುದಿನ ಕಿಲಿಮಂಜಾರೊಗೆ ವಿಮಾನ ಟಿಕೆಟ್ ನ್ನು ಕಾಯ್ದಿರಿಸಲು ಏರ್ ಇಂಡಿಯಾ ಸಿಬ್ಬಂದಿಗೆ ನಾವು ವಿನಂತಿಸಿದರೂ, ಅವರು ಯಾವುದೇ ಟಿಕೆಟ್‌ಗಳಿಲ್ಲ ಎಂದು ಹೇಳಿದರು. ಅವರು ಯಾವ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರೋ ಅದೇ ವಿಮಾನದಲ್ಲಿ "ನನ್ನ ಮಗಳು 4.75 ಲಕ್ಷ ರೂಪಾಯಿಗಳನ್ನು ಪಾವತಿಸಿ ಹೊಸ ಟಿಕೆಟ್‌ಗಳನ್ನು ಬುಕ್ ಮಾಡಿದರು. 

ನಾವು ಹಿಂತಿರುಗಿದ ನಂತರ ನಮಗೆ ಉಂಟಾದ ಅನಾನುಕೂಲದ ಬಗ್ಗೆ  ಮೇಕ್ ಮೈ ಟ್ರಿಪ್ ಹಾಗೂ ಏರ್ ಇಂಡಿಯಾಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯತ್ನಿಸಿದೆವಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. "ಒಂದು ವರ್ಷದ ಕಾಯುವಿಕೆ ನಂತರ, ನಾವು ಕಾನೂನು ನೋಟಿಸ್ ಕಳುಹಿಸಿದ್ದೇವೆ" ಎಂದು ರಾಮಭದ್ರನ್ ಹೇಳಿದ್ದಾರೆ. ಮೇ 2022 ರಲ್ಲಿ ಅವರು ಸಲ್ಲಿಸಿದ ಪ್ರಕರಣದಲ್ಲಿ ಏಪ್ರಿಲ್ 17 ರಂದು ನ್ಯಾಯಾಲಯ ತೀರ್ಪು ಪ್ರಕತಿಸಿದ್ದು ಸ್ವಲ್ಪ ಸಮಾಧಾನ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com