ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರಮುಖ ಕಾವೇರಿ ಜಲಾನಯನ ಪ್ರದೇಶವಾದ ಮಂಡ್ಯದಲ್ಲಿ ರೈತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಡ್ಯ ತಾಲೂಕಿನ ಇಂಡವಾಳು ಸಮೀಪ ಇಂದು ರೈತ ಸಂಘ ಮೂಲ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ರೈತರು, ಎತ್ತಿನಗಾಡಿ ಸಮೇತ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಯತ್ನಿಸಿದರು.
ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ, ಹೈಡ್ರಾಮ ನಡೆದು ಸ್ಥಳದಲ್ಲಿ ಭಾರೀ ಗದ್ದಲವೇರ್ಪಟ್ಟಿತ್ತು. ಈ ವೇಳೆ ಪೊಲೀಸರು ರೈತರನ್ನುಬಂಧಿಸಿ, ಬಸ್ನಲ್ಲಿ ಹತ್ತಿಸಿ ಕರೆದೊಯ್ದಿದ್ದಾರೆ.
Advertisement