ಬೆಂಗಳೂರು: ಪಾರ್ಟ್ ಟೈಮ್ ಜಾಬ್ ಆಸೆಗೆ ಕೇವಲ 15 ದಿನದಲ್ಲಿ 95 ಲಕ್ಷ ರು. ಕಳೆದುಕೊಂಡ ಟೆಕ್ಕಿ!

ಈಗಾಗಲೇ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಟೆಕ್ಕಿಯೊಬ್ಬರು ಪಾರ್ಟ್ ಟೈಮ್ ಜಾಬ್ ಮೂಲಕ ಹೆಚ್ಚು ಗಳಿಸುವ ಆಸೆಗೆ ಬಿದ್ದು ಆನ್‌ಲೈನ್ ವಂಚಕರಿಂದ 95 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈಗಾಗಲೇ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಟೆಕ್ಕಿಯೊಬ್ಬರು ಪಾರ್ಟ್ ಟೈಮ್ ಜಾಬ್ ಮೂಲಕ ಹೆಚ್ಚು ಗಳಿಸುವ ಆಸೆಗೆ ಬಿದ್ದು ಆನ್‌ಲೈನ್ ವಂಚಕರಿಂದ 95 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ತುಷಾರ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡಿದ್ದಾರೆ.  ಆರಂಭದಲ್ಲಿ ಅವರಿಗೆ ಸರಳ ಟಾಸ್ಕ್ ನೀಡುವ ಮೂಲಕ ಕುಮಾರ್ ಅವರನ್ನು ವಂಚಕರು ಯಾಮಾರಿಸಿದ್ದಾರೆ. ಕೆಲಸ ತುಬಾ ಸರಳವಾಗಿದ್ದು, ಹೂಡಿಕೆ ಮಾಡಿದ  ಹಣಕ್ಕೆ ದುಪ್ಪಟ್ಟು ಗಳಿಸುವುದಾಗಿ  ಈ ಕೆಲಸಕ್ಕೆ ಸೈನ್ ಅಪ್ ಮಾಡಿದರೆ ಹಣ ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ಭರವಸೆ ನೀಡಿದರು.

ಟೆಲಿಗ್ರಾಮ್ ಗುಂಪಿನ ಭಾಗವಾಗಿ ರಚಿಸಲಾದ ನಕಲಿ ‘ಡಿಜಿಟಲ್ ವ್ಯಾಲೆಟ್’ಗೆ ತಮ್ಮ ಹಣವನ್ನು ಜಮಾ ಮಾಡುವ ಮೂಲಕ ಕುಮಾರ್ ಅವರಿಗೆ ಆಮಿಷವೊಡ್ಡಿದ್ದಾರೆ. ಗುಂಪಿನೊಳಗಿನ ಇತರ ಜನರಿಂದ ನಿರಂತರವಾಗಿ ಸಂದೇಶಗಳು ಬರುತ್ತಿದ್ದವು, ಅವರು ಕಾರ್ಯಗಳನ್ನು ನಿರ್ವಹಿಸುವ ಮೂಲಕ ಉತ್ತಮ ಹಣ ಪಡೆಯುತ್ತಿರುವುದಾಗಿ ಕುಮಾರ್ ಅವರಿಗೆ ಭರವಸೆ ನೀಡಿದರು, ಹೀಗಾಗಿ ಅದು ನಿಜವೆಂದು ನಂಬಿದ ಕುಮಾರ್ ಅವರು ಕಾರ್ಯವೊಂದಕ್ಕೆ ಸಹಿ ಹಾಕಿದರು, ನಂತರ ಅವರು 15 ದಿನಗಳಲ್ಲಿ 95 ಲಕ್ಷ ರೂಪಾಯಿಗಳ ಉಳಿತಾಯದ ಹಣ ಕಳೆದುಕೊಂಡಿದ್ದಾರೆ.

ಬೆಳ್ಳಂದೂರಿನ ಐಟಿ ಕಂಪನಿಯಲ್ಲಿ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡಿದ ನಂತರ, ಕುಮಾರ್ ತನ್ನ ಉಳಿದ ಸಮಯವನ್ನು ಪಾರ್ಟ್ ಟೈಮ್ ಜಾಬ್ ಗಾಗಿ ಮೀಸಲಿಟ್ಟರು, ವಸ್ತುಗಳನ್ನು ಗುರುತಿಸುವುದು ಮತ್ತು ಸರಳ ಗಣಿತದ ಲೆಕ್ಕಾಚಾರಗಳು ಸೇರಿದಂತೆ ಮೂಲಭೂತ ಕಾರ್ಯಗಳನ್ನು ಪೂರ್ಣಗೊಳಿಸುವ ಕೆಲಸವಾಗಿತ್ತು.

ಆಬ್ಜೆಕ್ಟ್ ಫೋನ್ ಅಥವಾ ಟೆಲಿವಿಷನ್ ಎಂದು ಗುರುತಿಸುವ ಕಾರ್ಯಕ್ಕಾಗಿ 500 ರೂ ಆರಂಭಿಕ ಗಳಿಕೆಯೊಂದಿಗೆ, ಕುಮಾರ್ ಅವರನ್ನು ನಕಲಿ ಯೋಜನೆಗೆ ಆಮಿಷವೊಡ್ಡಲಾಯಿತು. ಅವರು ಸುಲಭವಾದ ಕಾರ್ಯಕ್ಕಾಗಿ ಸೈನ್ ಅಪ್ ಮಾಡಿದರೆ ಅವರ ಹಣವು ದ್ವಿಗುಣಗೊಳ್ಳುತ್ತದೆ ಮತ್ತು ಅವರು ಸಂಕೀರ್ಣವಾದ ಕೆಲಸವನ್ನು ಪೂರ್ಣಗೊಳಿಸಿದರೆ ಮೊತ್ತವು ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ಅವರನ್ನು ನಂಬಿಸಿದರು. ಕೆಲಸ ಪೂರ್ಣಗೊಳಿಸಿದ ನಂತರ ಪ್ರತಿದಿನ ಅವರ ಡಿಜಿಟಲ್ ಟೆಲಿಗ್ರಾಮ್ ವ್ಯಾಲೆಟ್‌ಗೆ ಹಣವನ್ನು ಜಮಾ ಮಾಡಲಾಗುತ್ತಿತ್ತು.

ಮೇಲಾಗಿ, 1 ಕೋಟಿಗೂ ಹೆಚ್ಚು ಹೂಡಿಕೆಯನ್ನು ಒಳಗೊಂಡಿರುವ ಕೊನೆಯ ಕಾರ್ಯದವರೆಗೆ ಕುಮಾರ್ ಅವರನ್ನು ಮುಂದುವರಿಸಲು ಕೇಳಲಾಯಿತು, ಏಕೆಂದರೆ ಅದು ಅವರಿಗೆ ದೊಡ್ಡ ಮೊತ್ತವನ್ನು ನೀಡುತ್ತಿತ್ತು. ಮೋಸದ ಚಟುವಟಿಕೆಯ ಉದ್ದಕ್ಕೂ, ಹಲವಾರು ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಕುಮಾರ್‌ಗೆ ವಂಚಕರು ಕೇಳಿದ್ಗಾರೆ.  ಅದನ್ನು ಹಲವಾರು ಇತರ ಖಾತೆಗಳಿಗೆ  ವರ್ಗಾಯಿಸಲಾಯಿತು. ಆಧಾರ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗುವ ನಿರೀಕ್ಷೆಯಲ್ಲಿದ್ದ ಕುಮಾರ್, ಕಷ್ಟಪಟ್ಟು ಸಂಪಾದಿಸಿದ 95 ಲಕ್ಷ ರೂ. ಕಳೆದು ಕೊಂಡಿದ್ದಾರೆ.

ಹೆಚ್ಚು ವಿದ್ಯಾವಂತರೇ ಹಣ ದ್ವಿಗುಣಗೊಳ್ಳುವ ಆಮೀಷಕ್ಕೆ ಸಿಲುಕುತ್ತಿರುವುದು ವಿಪರ್ಯಾಸ, ಈ ರೀತಿಯ ಯೋಜನೆಯನ್ನು ನಂಬಿ ಪ್ರತಿದಿನ ಕನಿಷ್ಠ ಐದು ಪ್ರಕರಣಗಳು  ದಾಖಲಾಗುತ್ತಿವೆ. ನಾಗರಿಕರು ತಮ್ಮ ಹಣವನ್ನು ಅವರು ಆಯ್ಕೆ ಮಾಡಿದಂತೆ ಬಳಸಿಕೊಳ್ಳುವ ಹಕ್ಕನ್ನು ಹೊಂದಿದ್ದರೂ, ಹೂಡಿಕೆ ವೇದಿಕೆಗಳ ನ್ಯಾಯಸಮ್ಮತತೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ ಎಂದು ಡಿಸಿಪಿ (ಆಗ್ನೇಯ ವಿಭಾಗ) ಸಿ.ಕೆ.ಬಾಬಾ ಹೇಳಿದ್ದಾರೆ.

ಪ್ರತಿದಿನ, ಕಷ್ಟಪಟ್ಟು ದುಡಿಯುವ ವ್ಯಕ್ತಿಗಳು, ವಿಶೇಷವಾಗಿ ಅಸ್ತಿತ್ವದಲ್ಲಿರುವ ಉದ್ಯೋಗಗಳೊಂದಿಗೆ  ವಿದ್ಯಾವಂತರು ಸಂಪತ್ತನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಮತ್ತು ಪ್ರೋಗ್ರಾಮ್ ಮಾಡಲಾದ ಯೋಜನೆಗಳಿಗೆ ಬಲಿಯಾಗುತ್ತಾರೆ, ಆದರೆ ಅಂತಿಮವಾಗಿ ಅವರು ಕಷ್ಟಪಟ್ಟು ಗಳಿಸಿದ ಉಳಿತಾಯವನ್ನು ಖಾಲಿ ಮಾಡುವ ಬಲೆಗಳಾಗಿವೆ ಎಂದಿದ್ದಾರೆ. ಈ ಸಂಬಂಧ ಆಗ್ನೇಯ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com