ಒಡಿಶಾ ರೈಲು ಅಪಘಾತ: ಕರ್ನಾಟಕದ ಕಳಸ ತಾಲೂಕಿನ ಎಲ್ಲಾ 110 ಪ್ರಯಾಣಿಕರು ಸುರಕ್ಷಿತ

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12864) ನಲ್ಲಿ ಪ್ರಯಾಣಿಸುತ್ತಿದ್ದ ಕಳಸಾ ತಾಲೂಕಿನ ಎಲ್ಲಾ 110 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. 
ಒಡಿಶಾದಲ್ಲಿ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ
ಒಡಿಶಾದಲ್ಲಿ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ
Updated on

ಬೆಂಗಳೂರು: ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12864) ನಲ್ಲಿ ಪ್ರಯಾಣಿಸುತ್ತಿದ್ದ ಕಳಸಾ ತಾಲೂಕಿನ ಎಲ್ಲಾ 110 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. 

ಕಳಸ, ಹೊರನಾಡು ಮತ್ತು ಸಂಸೆಯಿಂದ ಒಟ್ಟು 110 ಜನರು ಜೈನರ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಶಿಖರ್ಜಿಗೆ ಪ್ರಯಾಣ ಬೆಳೆಸಿದ್ದರು. ಇವರೆಲ್ಲರೂ ಜೂನ್ 1 ರಂದು ಬೆಂಗಳೂರಿನಿಂದ ಹೊರಟಿದ್ದರು.

ಒಡಿಶಾದಲ್ಲಿ ನೂರಾರು ಜನರ ಸಾವಿಗೆ ಕಾರಣವಾದ ಮೂರು ರೈಲು ದುರಂತದ ಸುದ್ದಿಯ ನಂತರ ಕಳಸಾದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

ಒಡಿಶಾದ ಬಾಲಸೋರ್‌ನಲ್ಲಿ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾಗಿದೆ.

ರೈಲು ಅಪಘಾತದ ಬಳಿಕ ಮಹಿಮ ಸಾಗರ ಮುನಿ ಬೆಂಬಲದೊಂದಿಗೆ ತೀರ್ಥಯಾತ್ರೆಗೆ ತೆರಳಿದ್ದ ಪ್ರಯಾಣಿಕರನ್ನು ಸಂಪರ್ಕಿಸಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಎಲ್ಲಾ 110 ಪ್ರಯಾಣಿಕರು ಒಟ್ಟಿಗೆ ಪ್ರಯಾಣಿಸುತ್ತಿದ್ದರು ಮತ್ತು ಅವರನ್ನು ಸಂಪರ್ಕಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಬಿ ಆರ್ ಹೇಳಿದ್ದಾರೆ.

ತಂಡದ ಭಾಗವಾಗಿದ್ದ ಶೇಷರಾಜ್ ಜೈನ್ ಮಾತನಾಡಿ, ನಾವು ರೈಲಿನ ಕೊನೆಯ ನಾಲ್ಕು ಬೋಗಿಗಳಲ್ಲಿ ವಿಶಾಖಪಟ್ಟಣದವರೆಗೆ ಪ್ರಯಾಣಿಸುತ್ತಿದ್ದೆವು. ರೈಲಿನ ಇಂಜಿನ್ ಬದಲಾವಣೆಯಿಂದ ಹಿಂದೆ ಇದ್ದ ಬೋಗಿಗಳು ಮುಂದೆ ಬಂದವು. ಪರಿಣಾಮವಾಗಿ, ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದರು. 

ಶನಿವಾರ ಬಸ್‌ನಲ್ಲಿ ಎಲ್ಲರೂ ಕೋಲ್ಕತ್ತಾ ತಲುಪಿದ್ದು, ಭಾನುವಾರ ಶಿಖರ್ಜಿ ತಲುಪುವುದಾಗಿ ತಿಳಿಸಿದರು.

ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ್ ಮಾತನಾಡಿ, ಎಲ್ಲಾ ಯಾತ್ರಾರ್ಥಿಗಳ ಸುರಕ್ಷತೆಯು ಅವರ ಒಳ್ಳೆಯ ಕಾರ್ಯಗಳ ಫಲಿತಾಂಶವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com