ಶೀತ, ನೆಗಡಿ, ಕೆಮ್ಮು, ಜ್ವರ ಎಂದು ಹೇಳದೆ ಕೇಳದೆ ಆ್ಯಂಟಿಬಯಾಟಿಕ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ: ಐಎಂಎ ಸಲಹೆ

ಮಾರ್ಚ್ ತಿಂಗಳ ಆರಂಭದಲ್ಲಿ ಬಿಸಿಲು, ಹವಾಮಾನದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದಂತೆ ನೆಗಡಿ, ಕೆಮ್ಮು, ಶೀತ, ಜ್ವರ ಕೂಡ ಸಾಮಾನ್ಯವಾಗಿದೆ. ಜ್ವರ, ಶೀತ, ನೆಗಡಿ ಎಂದು ಜನರು ತಮ್ಮಷ್ಟಕ್ಕೆ ಮೆಡಿಕಲ್ ಗೆ ಹೋಗಿ ಮಾತ್ರೆಗಳನ್ನು ಖರೀದಿಸಿ ಮನೆಗೆ ತಂದು ಸೇವಿಸುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲಿ ಬಿಸಿಲು, ಹವಾಮಾನದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದಂತೆ ನೆಗಡಿ, ಕೆಮ್ಮು, ಶೀತ, ಜ್ವರ ಕೂಡ ಸಾಮಾನ್ಯವಾಗಿದೆ. ಜ್ವರ, ಶೀತ, ನೆಗಡಿ ಎಂದು ಜನರು ತಮ್ಮಷ್ಟಕ್ಕೆ ಮೆಡಿಕಲ್ ಗೆ ಹೋಗಿ ಮಾತ್ರೆಗಳನ್ನು ಖರೀದಿಸಿ ಮನೆಗೆ ತಂದು ಸೇವಿಸುತ್ತಾರೆ.

 ಹೀಗಿರುವಾಗ ಜ್ವರ ಇದ್ದಲ್ಲಿ ಆ್ಯಂಟಿಬಯೋಟಿಕ್ಸ್ ಸೇವಿಸಬೇಡಿ ಎಂದು ಭಾರತೀಯ ವೈದ್ಯಕೀಯ ಸಂಘದ (IMA) ಸದಸ್ಯರು ನಾಗರಿಕರಿಗೆ ಸಲಹೆ ನೀಡಿದ್ದಾರೆ. IMA ಯ ವೈದ್ಯರು ಪರಿಸರ ಸಚಿವಾಲಯ ಮತ್ತು ಪುರಸಭೆಗಳಲ್ಲಿನ ತಮ್ಮ ಸಹೋದ್ಯೋಗಿಗಳಿಗೆ H3N2 ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಪ್ರಕರಣಗಳಿಗೆ ಬೋರ್ ವೆಲ್ ನೀರು ಮತ್ತು ಒಳಚರಂಡಿ ನೀರಿನ ಮಾದರಿಗಳನ್ನು ಪರೀಕ್ಷಿಸುವಂತೆ ಒತ್ತು ನೀಡುತ್ತಿದ್ದಾರೆ. 

ಜನರು ಅನುಸರಿಸಬೇಕಾದ ಮಾರ್ಗಸೂಚಿಗಳು: ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಗಾಗಿ IMA ಸ್ಥಾಯಿ ಸಮಿತಿಯು ಜನರು ಅನುಸರಿಸಲು ಮಾರ್ಗಸೂಚಿಗಳ ಸರಣಿಯನ್ನು ಬಿಡುಗಡೆ ಮಾಡಿದೆ. ನಾಗರಿಕರು ಪ್ರತಿಜೀವಕಗಳನ್ನು ತೆಗೆದುಕೊಳ್ಳಬಾರದು. ಇದು ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾದ ಉಪಸ್ಥಿತಿಯನ್ನು ಕ್ರಮೇಣ ಕೊಲ್ಲುತ್ತದೆ, ಉತ್ತಮ ಬ್ಯಾಕ್ಟೀರಿಯಾಗಳು ರೋಗಗಳ ವಿರುದ್ಧ ಹೋರಾಡುವ ಮಾನವನ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿರುತ್ತವೆ. 

ಜನರಿಗೆ H3N2 ಸಾಂಕ್ರಾಮಿಕ ಮತ್ತು ಇತರ ಸೋಂಕುಗಳ ವಿರುದ್ಧ ಎಚ್ಚರಿಕೆ ನೀಡುವುದು, ನೀರಿನ ಮಾದರಿಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದು AMR ಗಾಗಿ IMA ಸ್ಥಾಯಿ ಸಮಿತಿ ಅಧ್ಯಕ್ಷ ಡಾ ನರೇಂದ್ರ ಸೈನಿ ಹೇಳಿದ್ದಾರೆ.

ಕೋವಿಡ್ ಸಮಯದ ಮುನ್ನೆಚ್ಚರಿಕೆಯನ್ನೇ ಪಾಲಿಸಿ: ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಇತ್ತೀಚೆಗೆ ಸೋಂಕು ಕಡಿಮೆಯಾದ ನಂತರ ಜನರು ಕಾಳಜಿಯನ್ನು ಸಂಪೂರ್ಣವಾಗಿ ಮರೆಯುತ್ತಿದ್ದಾರೆ. ಇದರಿಂದ H3N2 ಪ್ರಕರಣಗಳು ಹೆಚ್ಚುತ್ತಿವೆ. ಶೀತ ಮತ್ತು ಕೆಮ್ಮು ಇರುವವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂಬುದನ್ನು ನಾಗರಿಕರು ಮರೆತಿದ್ದಾರೆ. ನಾಗರಿಕರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಮರೆತಿದ್ದಾರೆ. ಅನಾರೋಗ್ಯದ ವೇಳೆ ಜನದಟ್ಟಣೆ ಸೇರುವುದನ್ನು ತಪ್ಪಿಸಬೇಕು. ಋತುವಿನ ಬದಲಾವಣೆಗಳಿಂದಾಗಿ ವೈರಲ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವಾಗ  ಶೀತ, ಕೆಮ್ಮು, ನೆಗಡಿ, ಜ್ವರ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

5 ದಿನಕ್ಕಿಂತ ಹೆಚ್ಚು ಕಾಲ ಸೋಂಕಿದ್ದರೆ ವೈದ್ಯರನ್ನು ಸಂಪರ್ಕಿಸಿ: ಪ್ರತಿಜೀವಕಗಳು ವೈರಲ್ ಸೋಂಕನ್ನು ಗುಣಪಡಿಸುವುದಿಲ್ಲ, ಅವು ಬ್ಯಾಕ್ಟೀರಿಯಾದ ಸೋಂಕನ್ನು ಒಳಗೊಳ್ಳುತ್ತವೆ ಎಂದು ನಾಗರಿಕರು ತಿಳಿದಿರಬೇಕು. ಪ್ರತಿಜೀವಕಗಳನ್ನು ತೆಗೆದುಕೊಳ್ಳುವುದರಿಂದ ರೋಗಗಳ ವಿರುದ್ಧ ಹೋರಾಡುವ ಅವರ ಪ್ರತಿರೋಧವು ಕಡಿಮೆಯಾಗುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಸೂಚಿಸಿದ ಔಷಧಿಗಳನ್ನು ನಾಗರಿಕರು ತೆಗೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ. ಸೋಂಕು ಐದು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಈ ಸಮಯದಲ್ಲಿ ಉತ್ತಮ ಅರ್ಹ ವೈದ್ಯರನ್ನು ಭೇಟಿ ಮಾಡಬೇಕೆಂದು ಐಎಂಎ ಸಲಹೆ ನೀಡಿದೆ. 

ಹೆಚ್ಚುತ್ತಿರುವ H3N2 ಪ್ರಕರಣಗಳನ್ನು ಸಹ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಮೇಲ್ವಿಚಾರಣೆ ಮಾಡುತ್ತಿದೆ ಎಂದು IMA ಸದಸ್ಯರು ಹೇಳಿದ್ದಾರೆ.ಈ ಸಮಯದಲ್ಲಿ ಮೆಡಿಕಲ್ ಗಳಲ್ಲಿ ಆಂಟಿಬಯಾಟಿಕ್ ಗಳನ್ನು ಸೇವಿಸುವುದು, ಮಾರಾಟ ಮಾಡುವ ಬಗ್ಗೆ ಐಎಂಎ ಕಳವಳ ವ್ಯಕ್ತಪಡಿಸಿದೆ. ಔಷಧಾಲಯಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದ್ದು, ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com