ವಿಧಾನಸಭೆ ಚುನಾವಣೆ: ಮನೆ ಬಾಗಿಲಿಗೆ ನೀರು ಕೊಡುವ ಮೂಲಕ ಮತದಾರರ ಓಲೈಕೆಗೆ ಯತ್ನ

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ)ಗೆ ವಿವಿಧ ಹಂತದ ರಾಜಕಾರಣಿಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚಿನ ನೀರು ಪೂರೈಸಬೇಕು ಎಂಬ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ)ಗೆ ವಿವಿಧ ಹಂತದ ರಾಜಕಾರಣಿಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚಿನ ನೀರು ಪೂರೈಸಬೇಕು ಎಂಬ ಬೇಡಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಥಳೀಯ ವಾರ್ಡ್ ನಾಯಕನಿಂದ ಹಿಡಿದು ಕ್ಷೇತ್ರದ ಶಾಸಕರವರೆಗೆ ಎಲ್ಲರೂ ತಮ್ಮ ಮತದಾರರನ ಮನೆ ಬಾಗಿಲಿಗೆ ಹೆಚ್ಚು ನೀರು ತುಂಬಿಸಲು ಬಯಸುತ್ತಿದ್ದಾರೆ.

ನಂಬಲರ್ಹ ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದು, ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ನೀರು ಸರಬರಾಜು ಮಾಡುವಂತೆ ಶಾಸಕರು ಅಥವಾ ತಮ್ಮ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳಾಗಿರುವವರು ಕೇಳಿಕೊಳ್ಳುತ್ತಿದ್ದಾರೆ.

"ನಾವು ಬೆಂಗಳೂರಿಗೆ ದಿನಕ್ಕೆ ಗರಿಷ್ಠ 1,450 ಮಿಲಿಯನ್ ಲೀಟರ್ ಕಾವೇರಿ ನೀರನ್ನು ಮಾತ್ರ ಪೂರೈಸಬಹುದು. ಏಕೆಂದರೆ ಅದು ಪಂಪ್ ಮಾಡುವ ಗರಿಷ್ಠ ಪ್ರಮಾಣವಾಗಿದೆ. ನಿಜವಾದ ಅವಶ್ಯಕತೆ ಮತ್ತು ಅಗತ್ಯವಿದ್ದಲ್ಲಿ, ನಿರ್ದಿಷ್ಟ ಪ್ರದೇಶಗಳಿಗೆ ಉಚಿತವಾಗಿ ನೀರಿನ ಟ್ಯಾಂಕರ್‌ ಕಳುಹಿಸುವುದನ್ನು ನಾವು ಪರಿಗಣಿಸಬಹುದು ”ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ನೀರಿಗಾಗಿ ಮಾತ್ರವಲ್ಲದೆ ಪರ್ಯಾಯ ದಿನಗಳಲ್ಲಿ ನಾವು ನೀರು ಸರಬರಾಜು ಮಾಡುವ ಸಮಯವನ್ನು ಹೆಚ್ಚಿಸುವ ಬೇಡಿಕೆಯೂ ಇದೆ. "ಅವರಲ್ಲಿ ಕೆಲವರು ನಿರ್ದಿಷ್ಟ ಪ್ರದೇಶಗಳಲ್ಲಿ ಅದನ್ನು ಮೂರು ಗಂಟೆಗಳವರೆಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಇನ್ನು ಹಲವು ರಾಜಕಾರಣಿಗಳು ಹಣ ನೀಡಿ ಖಾಸಗಿ ನೀರಿನ ಟ್ಯಾಂಕರ್‌ಗಳ ಮೂಲಕವೂ ನೀರು ಪೂರೈಸುತ್ತಿದ್ದು, ಆ ಟ್ಯಾಂಕರ್ ಗಳಿಗೆ ತಮ್ಮ ಪಕ್ಷದ ಚಿಹ್ನೆಗಳು ಮತ್ತು ಅಭ್ಯರ್ಥಿಗಳ ಹೆಸರನ್ನು ಅಂಟಿಸುವುದು ಸಾಮಾನ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com