ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತಿದೆ: ಗೃಹ ಸಚಿವ ಅಮಿತ್ ಶಾ

ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುವುದರಿಂದ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ
Updated on

ಬೆಂಗಳೂರು: ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುವುದರಿಂದ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಮಾದಕ ದ್ರವ್ಯ ನಿಯಂತ್ರಣವು ಕೇವಲ ಕೇಂದ್ರದ ಹೋರಾಟವಲ್ಲ. ಬದಲಿಗೆ, ರಾಜ್ಯಗಳು, ಸಮಾಜಗಳು ಮತ್ತು ನಾಗರಿಕರ ಹೋರಾಟವಾಗಿದೆ ಎಂದು ಅವರು ಹೇಳಿದರು.

ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ಕನಿಷ್ಠ 60-70 ಪ್ರತಿಶತದಷ್ಟು ಮಾದಕವಸ್ತು ಕಳ್ಳಸಾಗಣೆ ಸಮುದ್ರ ಮಾರ್ಗದ ಮೂಲಕ ನಡೆಯುತ್ತದೆ. ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಯಾರನ್ನೂ ಉಳಿಸದಂತೆ ನಾವು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಿನ ವಿಧಾನವನ್ನು ಹೊಂದಿರಬೇಕು ಎಂದು ಹೇಳಿದರು. 

ಮಾದಕ ದ್ರವ್ಯ ಸರಬರಾಜಿಗೆ ಸಂಬಂಧಿಸಿದಂತೆ ನಾವು ದೊಡ್ಡ ವ್ಯಕ್ತಿಯನ್ನು ಹಿಡಿದಾಗ, ನಾವು ಕೆಳಗಿನ ನೆಟ್‌ವರ್ಕ್‌ಗಳ ಸಂಪೂರ್ಣ ಸರಣಿಯನ್ನು ತನಿಖೆ ಮಾಡಬೇಕಾಗುತ್ತದೆ. ನಾವು ಮಾದಕ ವ್ಯಸನಿಯನ್ನು ಹಿಡಿದಾಗ, ಅವುಗಳನ್ನು ಸರಬರಾಜು ಮಾಡಿದವರ ಬಗ್ಗೆ ನಾವು ತನಿಖೆ ನಡೆಸಬೇಕಾಗುತ್ತದೆ. ಮಾದಕ ವ್ಯಸನವನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ವಾಸಿಯಾಗದ ಹುಣ್ಣಾಗುತ್ತದೆ ಎಂದು ಅವರು ಹೇಳಿದರು.

'ನಾವು ಮಾದಕ ವ್ಯಸನ ಮುಕ್ತ ಭಾರತ ಗುರಿ ಹೊಂದಿದ್ದೇವೆ. ನಾವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದೇವೆ ಮತ್ತು 2025ರಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹೊಂದಿದ್ದೇವೆ. ಈ ಗುರಿಗಳನ್ನು ಸಾಧಿಸಲು ಡ್ರಗ್ಸ್ ಮುಕ್ತ ಸಮಾಜವು ಅಡಿಪಾಯವಾಗಿದೆ. ಎಲ್ಲ ಸರ್ಕಾರಗಳು ಕೈಜೋಡಿಸಬೇಕು. ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡುವುದನ್ನು ನಾವು ಜನರ ಹೋರಾಟವನ್ನಾಗಿ ಮಾಡಬೇಕಾಗಿದೆ' ಎಂದು ಶಾ ಹೇಳಿದರು.

ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಸಂಸ್ಕೃತಿಯಂತಹ ಎಲ್ಲಾ ಸರ್ಕಾರಿ ಇಲಾಖೆಗಳು ಮಾದಕ ವಸ್ತುಗಳ ವಿರುದ್ಧದ ಅಭಿಯಾನದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಮಾದಕ ದ್ರವ್ಯ ಪತ್ತೆ, ಜಾಲ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿಯು ಮಾದಕ ವಸ್ತುಗಳ ವಿರುದ್ಧದ ಹೋರಾಟದ ನಾಲ್ಕು ಆಧಾರಗಳಾಗಿವೆ ಎಂದು ಹೇಳಿದರು.

'ಅಪರಾಧಿಗಳ ಬಂಧನವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ನಾವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ಮಾದಕವಸ್ತು ಪ್ರಕರಣಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬಾರದು. ನಾವು ಅದನ್ನು ಸೂಕ್ಷ್ಮವಾಗಿ ಎದುರಿಸಬೇಕು, ನಾವು ಮಾದಕ ದ್ರವ್ಯ ಪತ್ತೆ, ನೆಟ್‌ವರ್ಕ್‌ಗಳ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ ಮೂಲಕ ಸಾಮೂಹಿಕವಾಗಿ ಹೋರಾಡಬೇಕು' ಎಂದು ಸಚಿವರು ಹೇಳಿದರು.

ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ಕಾಯಿದೆಯಲ್ಲಿ ಬಲವಾದ ನಿಬಂಧನೆಗಳಿವೆ. ಆದರೆ, ನಾವು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿ ಮತ್ತು ಮಾದಕವಸ್ತು ವ್ಯಾಪಾರಿಗಳ ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಈ ಕಾನೂನುಗಳನ್ನು ಬಳಸಿಕೊಂಡು ಎಷ್ಟು ಮಂದಿಯನ್ನು ಜೈಲಿಗೆ ಹಾಕಲಾಗಿದೆ ಎಂಬುದನ್ನು ಕಂಡುಕೊಳ್ಳಿ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com