social_icon

ಬೌದ್ಧ ಮಂದಿರ ಕೆಡವಿ ತಿರುಪತಿ ದೇಗುಲ ನಿರ್ಮಾಣ: ಚೇತನ್ ಅಂಹಿಸಾ ಹೊಸ ವಿವಾದ

ಬೌದ್ಧ ಮಂದಿರವನ್ನು ಕೆಡವಿ ತಿರುಪತಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Published: 15th April 2023 04:03 PM  |   Last Updated: 15th April 2023 04:47 PM   |  A+A-


Chetan Ahimsa

ನಟ ಚೇತನ್ ಅಹಿಂಸಾ

Posted By : Srinivasamurthy VN
Source : Online Desk

ಬೆಂಗಳೂರು: ಬೌದ್ಧ ಮಂದಿರವನ್ನು ಕೆಡವಿ ತಿರುಪತಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆ ಮಾತನಾಡಿರುವ ನಟ ಚೇತನ್, 'ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆಯೂ ಇಂತದ್ದೇ ವಿವಾದಾತ್ಮಕ ಹೇಳಿಕೆ ನೀಡಿರುವ ಚೇತನ್, "ನಿಜ ಹೇಳಬೇಕು ಅಂದರೆ ಈ ದೇವಸ್ಥಾನಗಳೆಲ್ಲಾ ಹಿಂದೆ ಬುದ್ಧ ವಿಹಾರಗಳು ಆಗಿತ್ತು. ವೈದಿಕ ಕಾಲ ಎನ್ನುವುದು ಕ್ರಿಸ್ತ ಪೂರ್ವ 1500 ಕ್ರಿಸ್ತಪೂರ್ವದಿಂದ 500 ಕ್ರಿಸ್ತಪೂರ್ವ ನಡುವಿನದ್ದು. ಆ ನಂತರ ಬುದ್ಧ ಬರ್ತಾರೆ. ವೈದಿಕ ಕಾಲದಲ್ಲಿ ಹೋಮ, ಹವಯ, ಯಜ್ಞ ಎಲ್ಲವೂ ಇತ್ತು. ಆದರೆ ದೇವಸ್ಥಾನ, ಮಂದಿರಗಳು ಇರಲಿಲ್ಲ. ಬುದ್ಧ ಬಂದಮೇಲೆ ಅಶೋಕನ ನಂತರ ಬೌದ್ದ ಧರ್ಮ ಹರಡಿದ ನಂತರ ಬುದ್ಧ ಸ್ತೂಪಗಳು, ವಿಹಾರಗಳು ಬಂತು. ಆ ನಂತರ ಮತ್ತೆ ಬ್ರಾಹ್ಮಣ್ಯ, ವೈದಿಕ ಪರಂಪರೆ ಬಂದಾಗ 84 ಸಾವಿರ ಬುದ್ಧ ವಿಹಾರಗಳನ್ನು ಒಡೆದು ಹಾಕಿ ಹಿಂದೂ ಮಂದಿಗಳನ್ನಾಗಿ ಮಾಡಿದರು"

"ಅಲ್ಲಿಯವರೆಗೂ ದೇವಸ್ಥಾನಗಳು ಇರಲಿಲ್ಲ. ಯಾಕಂದರೆ ವೈದಿಕ ಪರಂಪರೆಯಲ್ಲಿ ಹೋಮ, ಹವ ಇರುತ್ತೆ. ಇದಕ್ಕೆಲ್ಲಾ ದಾಖಲೆಗಳು ಇವೆ. ಇದಕ್ಕೆ ಎಲ್ಲಿ ಬೇಕಾದರೂ ಸಾಕ್ಷಿ ತೋರಿಸುತ್ತೇನೆ. ತಿರುಪತಿ, ಕೇದಾರನಾಥ ದೇವಸ್ಥಾನಗಳನ್ನು ಇದೇ ರೀತಿ ಕಟ್ಟಿದ್ದಾರೆ. ತಿರುಪತಿ ದೇವಸ್ಥಾನ ಕೂಡ ಮೊದಲು ಬುದ್ಧ ಮಂದಿರ ಆಗಿತ್ತು. ನಮ್ಮ ಇತಿಹಾಸ ದಾಖಲೆಗಳಲ್ಲಿ 84 ಸಾವಿರ ಬುದ್ಧ ವಿಹಾರಗಳು ಇವೆ ಎಂದು ಇದೆ. ಅದನ್ನೆಲ್ಲಾ ರಾಜ ಅಶೋಕ ಹಾಗೂ ಆತನ ನಂತರದವರು ಕಟ್ಟಿರುವುದು. 185 ಕ್ರಿಸ್ತಪೂರ್ವ ಬಂದಮೇಲೆ ವೈದಿಕ ಪರಂಪರೆ ವಾಪಸ್ ಬಂದಮೇಲೆ ಈ ಬುದ್ಧ ವಿಹಾರಗಳನ್ನು ಒಡೆದು, ಬುದ್ಧ ಬಿಕ್ಕುಗಳನ್ನು ಸಾಯಿಸೋದು, ಬುದ್ಧ ವಿಹಾರಗಳನ್ನು ವೈದಿಕ ಮಂದಿರಗಳಾಗಿ ಮಾಡಿದ್ದರು" ಎಂದಿದ್ದಾರೆ.

ಇದನ್ನೂ ಓದಿ: ಸಿನಿ ಸ್ಟಾರ್​ಗಳಿಗೆ ಸರ್ಕಾರಿ ಜಾಗ ಯಾಕೆ? ನಟರ ಸ್ಮಾರಕಕ್ಕೆ ಹೋರಾಟಗಾರ ಚೇತನ್‌ ಕ್ಯಾತೆ! ವಿಷ್ಣು ಅಭಿಮಾನಿಗಳ ಆಕ್ರೋಶ

"ಕರ್ನಾಟಕಕ್ಕೆ ಪರಿಯಾರ್, ಅಂಬೇಡ್ಕರ್ ಸಿದ್ದಾಂತ ಅಗತ್ಯ ಇದೆ. ಬಿಜೆಪಿಯ ಹಿಂದುತ್ವ ಕೂಡ ಅಲ್ಲ. ಕಾಂಗ್ರೆಸ್, ಜೆಡಿಎಸ್, ಆಪ್‌ನ ಪೊಲಿಟಿಕಲ್ ಹಿಂದೂಯಿಸಂ ಅಲ್ಲ, ಕಮ್ಯೂನಿಸಂ ಕೂಡ ಅಲ್ಲ. ಹೆಚ್‌ಟಿಪಿಐ ಮೊದಲೇ ಅಲ್ಲ. ನನ್ನ ಕಣ್ಣಲ್ಲಿ ನಮ್ಮ ದೇಶದ ಯಾವುದೇ ಪಕ್ಷ ಪರಿವರ್ತನೆಯ ಸಿದ್ಧಾಂತ ಹೇಳುತ್ತಿಲ್ಲ. ಸೈದ್ದಾಂತಿಕವಾಗಿ ನನಗೆ ಈ ವಿಚಾರಗಳ ಬಗ್ಗೆ ವಿರೋಧ ಇದೆ ಎಂದಿದ್ದಾರೆ.

"ಯಾವುದೇ ವ್ಯಕ್ತಿ ಮೇಲೆ ನನಗೆ ಕೋಪ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸತ್ಯ ಹೇಳುವ ಹಕ್ಕು ನಿಮಗಿದೆ. ನಾನು ಕಂಡ ಸತ್ಯ ನಾನು ಹೇಳ್ತೀನಿ. ನಾನು ಅಂಕಿ ಅಂಶ, ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ಅದನ್ನು ಸೋಲಿಸಲು ಸಾಧ್ಯವಾದರೆ ನಿಮ್ಮ ದಾಖಲೆ ಇಡಿ. ರಾಮ ಎನ್ನುವ ವ್ಯಕ್ತಿ ಈ ಕಾಲದಲ್ಲಿ ಇದ್ದರು, ಇಲ್ಲಿ ಹುಟ್ಟಿದರು ಎಂದು ತೋರಿಸಿ, ನಿಮ್ಮ ಧಾರ್ಮಿಕ ನಂಬಿಕೆ ಸತ್ಯ ಇರಬಹುದು. ಆದರೆ ನಮ್ಮ ವೈಚಾರಿಕತೆ, ಬೌದ್ದಿಕ ಪ್ರಪಂಚದ ಸತ್ಯ ಎಂದೆಂದಿಗೂ ಅಲ್ಲ. ಅದಕ್ಕೆ ಸಾಕ್ಷಿಯೂ ಇಲ್ಲ."

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ವೀಸಾ ರದ್ದು, ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ ಎಂದ ನಟ ಚೇತನ್ 

ಸಂದರ್ಶನದ ವಿಡಿಯೋ ಲಿಂಕ್ ಟ್ವೀಟ್ ಮಾಡಿದ ನಟ
ಈ ಸಂದರ್ಶನದ ವಿಡಿಯೋ ಲಿಂಕ್ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ನಟ ಚೇತನ್, "ಇತ್ತೀಚಿನ ಸಂದರ್ಶನವೊಂದರಲ್ಲಿ, ತಿರುಪತಿ ಮೂಲತಃ ಬೌದ್ಧ ಮಂದಿರ ಎಂದು ನಾನು ಹೇಳಿದ್ದೇನೆ. ಕೆ ಜಮನದಾಸ್ ಅವರು 'ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ' (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ - ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ/ ಆಕ್ರಮಣ ಮಾಡಲಾಗಿದೆ" ಎಂದು ಬರೆದುಕೊಂಡಿದ್ದಾರೆ.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp