ಬೆಂಗಳೂರು: ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಐಐಎಸ್ಸಿ ಕ್ಯಾಂಪಸ್ ಪ್ರವೇಶಿಸದಂತೆ ತಡೆ!

: ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ಸಂಸ್ಥೆಯ ಭದ್ರತಾ ಸಿಬ್ಬಂದಿಯು ಕ್ಯಾಂಪಸ್ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ತೀಸ್ತಾ ಸೆಟಲ್ವಾಡ್
ತೀಸ್ತಾ ಸೆಟಲ್ವಾಡ್
Updated on

ಬೆಂಗಳೂರು: ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ಸಂಸ್ಥೆಯ ಭದ್ರತಾ ಸಿಬ್ಬಂದಿಯು ಕ್ಯಾಂಪಸ್ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬ್ರೇಕ್ ದಿ ಸೈಲೆನ್ಸ್ ಆಯೋಜಿಸಿದ್ದ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕೋಮುವಾದಿ ಸಾಮರಸ್ಯ ಮತ್ತು ನ್ಯಾಯ" ಎಂಬ ಹೆಸರಿನಲ್ಲಿ ಸೆಟಲ್ವಾಡ್ ಅವರ ಭಾಷಣವನ್ನು ವಿದ್ಯಾರ್ಥಿಗಳ ಗುಂಪು ಬುಧವಾರ ಆಯೋಜಿಸಿತ್ತು. ಆದರೆ ಕೆಲವೇ ಗಂಟೆಗಳ ಮೊದಲು ಸೆಟಲ್ವಾಡ್ ಗೆ ಸಂಸ್ಥೆಯೊಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಯಿತು ಎಂದು  ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸಂಸ್ಥೆಯ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಆರಂಭದಲ್ಲಿ ಸೆಟಲ್ವಾಡ್ ರಿಗೆ ಪ್ರವೇಶವನ್ನು ನಿರಾಕರಿಸಿದರು. ಆಗ ಬೋಧಕವರ್ಗದ ಸದಸ್ಯರು ಸೆಟಲ್ವಾಡ್ ರನ್ನು ಒಳಗೆ ಬರಲು ಅನುಮತಿಸಬೇಕೆಂದು ತಿಳಿಸಿದರು ಎಂದು ಬೋಧಕವರ್ಗದ ಸದಸ್ಯರು ಹೇಳಿದರು.

ನಾವು ಒಂದು ವಾರದ ಮುಂಚಿತವಾಗಿ ಅನುಮತಿ ಕೇಳಿದ್ದೆವು ಮತ್ತು ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ  ಪಡೆದಿದ್ದವು. ಕೆಲವು ಗಂಟೆಗಳ ಹಿಂದೆ, ನಮ್ಮನ್ನು ರಿಜಿಸ್ಟ್ರಾರ್ ಕಚೇರಿಗೆ ಕರೆಸಲಾಯಿತು ಮತ್ತು ನಿರ್ದೇಶಕರು ಕಚೇರಿಯಲ್ಲಿಲ್ಲ ಮತ್ತು ನಾವು ಕಾಯ್ದಿರಿಸಿದ ಸಭಾಂಗಣದಲ್ಲಿ ಮಾತುಕತೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಯಿತು. ಆದಾಗ್ಯೂ, ಕ್ಯಾಂಪಸ್‌ನಲ್ಲಿ ಇನ್ನೂ ಮಾತುಕತೆ ನಡೆಯಬಹುದೆಂದು ನಮಗೆ ತಿಳಿಸಲಾಯಿತುಎಂದು ಭಾಷಣವನ್ನು ಆಯೋಜಿಸಲು ಸಹಾಯ ಮಾಡಿದ ವಿದ್ಯಾರ್ಥಿ ಶೈರಿಕ್ ಸೇನ್‌ಗುಪ್ತಾ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ವಿದ್ಯಾರ್ಥಿಗಳು ಜೊತೆಗಿದ್ದರೂ ಸೆಟಲ್ವಾಡ್ ಅವರನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ತಡೆದರು. ಸಾಮಾನ್ಯವಾಗಿ, ಸಂದರ್ಶಕರು ಪ್ರವೇಶಿಸುವ ಮೊದಲು ತಮ್ಮ ವಿವರಗಳನ್ನು ನೀಡಲು ಕೇಳಲಾಗುತ್ತದೆ.  ಭೇಟಿಯ ಬಗ್ಗೆ ಮಾಹಿತಿ ನೀಡದಿದ್ದರೆ ಗಾರ್ಡ್ ಗಳು ಪ್ರವೇಶ ತಡೆಯಬಹುದು. ಆದರೆ, ಮಾಹಿತಿ ನೀಡಿದ್ದರಿಂದ ಹಾಗಾಗಲಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಸುರ್ಜದೀಪ್ತ ಡಿ ಸರ್ಕಾರ್ ಹೇಳಿದರು.

ಕೆಲವು ಅಧ್ಯಾಪಕರು ಗಾರ್ಡ್ ಗಳನ್ನು ಸಂಪರ್ಕಿಸಿ ಮತ್ತು ಸೆಟಲ್ವಾಡ್ ಅವರ ಪ್ರವೇಶ ಸಂಬಂಧ ಮಾತನಾಡಿದರು, ಆ ನಂತರ ಸೆಟಲ್ವಾಡ್ ಅವರನ್ನು ಒಳಗೆ ಬಿಡಲಾಯಿತು ಎಂದು ಶೈರಿಕ್ ಹೇಳಿದರು. ಕ್ಯಾಂಪಸ್‌ನಲ್ಲಿ ಕೆಫೆಟೇರಿಯಾದಲ್ಲಿ ಮಾತುಕತೆ ನಡೆಸಲಾಯಿತು. ಆದರೆ, ಇತರೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆಯಲಾಯಿತು.

ಈ ಸಂಸ್ಥೆಯಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಈ ಹಿಂದೆ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಅವರನ್ನು ಆಹ್ವಾನಿಸಿದಾಗ, ಅವರು ಪೂರ್ವಾನುಮತಿ ಪಡೆದರೂ ಅಧಿಕಾರಿಗಳಿಗೆ ತಿಳಿದಿಲ್ಲದ ಕಾರಣ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com