ಹಾಸನ: ರೈಲಿನಿಂದ ಬಿದ್ದು ಬಾಲಕ ಸಾವು, ರಕ್ತದ ಮಡುವಿನಲ್ಲಿ ಗಂಟೆಗಳ ಕಾಲ ನರಳಿದ್ದ ಬಾಲಕ!

ಚಲಿಸುತ್ತಿರುವ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ರೈಲು ದುರಂತ; ಬಾಲಕ ಸಾವು
ಹಾಸನ ರೈಲು ದುರಂತ; ಬಾಲಕ ಸಾವು

ಬೆಂಗಳೂರು: ಚಲಿಸುತ್ತಿರುವ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಮತ್ತು ಮಾವಿನಿಕೆರೆ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲಿನಿಂದ ಕೆಳಗೆ ಬಿದ್ದಿದ್ದ ಐದು ವರ್ಷದ ಬಾಲಕ ಕಾಲು ಕತ್ತರಿಸಿದ್ದ ಸ್ಥಿತಿಯಲ್ಲಿ ಪೊದೆಯಲ್ಲಿ ಪತ್ತೆಯಾಗಿದ್ದ. ತೀವ್ರರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಬಾಲಕನನ್ನು 5 ವರ್ಷದ ಸಿಎ ಯೋಜಿತ್ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಬಾಲಕ ತನ್ನ ತಾಯಿ ಗೃಹಿಣಿ ಎಚ್‌ಎಸ್ ಸವಿತಾ ಅವರೊಂದಿಗೆ ಮೈಸೂರಿಗೆ ತೆರಳುತ್ತಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದವರು. ಇವರಿಬ್ಬರೂ ಜನವರಿ 30 ರಂದು ಕಡೂರಿನಿಂದ ಶಿವಮೊಗ್ಗ-ತಾಳಗುಪ್ಪ ಎಕ್ಸ್‌ಪ್ರೆಸ್‌ನ ಕಾಯ್ದಿರಿಸದ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ. 

ಈ ಬಗ್ಗೆ ಮಾತನಾಡಿರುವ ಬಾಲಕನ ತಂದೆ ಸಿಎಚ್ ಆನಂದ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ನೋವು ತೋಡಿಕೊಂಡಿದ್ದು, ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಎಲ್‌ಎಲ್‌ಬಿ ಪದವಿ ಪಡೆಯಲು ಕುಟುಂಬದೊಂದಿಗೆ ಮೈಸೂರಿಗೆ ತೆರಳುತ್ತಿದ್ದೆವು. ನನ್ನ ಮಗು ನನ್ನ ಹೆಂಡತಿ ಕೊಟ್ಟ ಬಿಸ್ಕೆಟ್‌ಗಳನ್ನು ಕೇಳಿದೆ. ಆಗ ಆಕೆ ಮೇಲಿರುವ ಲಗೇಜ್ ರ್ಯಾಕ್‌ನಲ್ಲಿ ಬಿಸ್ಕೆಟ್‌ಗಳನ್ನು ಬ್ಯಾಗ್‌ನಲ್ಲಿ ಇಡಲು ಪ್ರಯತ್ನಿಸುತ್ತಿದ್ದಳು. ಈ ವೇಳೆ ಆತ ಆಕೆಯಿಂದ ದೂರ ಹೋಗಿದ್ದ. ನಾನು ತಿರುಗಿ ನೋಡಿದಾಗ ಆತ ರೈಲಿನಲ್ಲಿ ಇರಲಿಲ್ಲ. ತೆರೆದಿದ್ದ ಬಾಗಿಲಿನ ಎರಡನೇ ಸೀಟಿನಲ್ಲಿ ಅವರಿದ್ದರು. ಅವನ ಅದರಿಂದ ಜಾರಿಬಿದ್ದಿರಬೇಕು ಎಂದು ಹೇಳಿದ್ದಾರೆ.

ಸಹ ಪ್ರಯಾಣಿಕರು ರೈಲಿನ ಎಮರ್ಜೆನ್ಸಿ ಬ್ರೇಕ್ ಚೈನ್ ಎಳೆಯಲು ಸಹಾಯ ಮಾಡಲಿಲ್ಲ
ತನ್ನ ಮಗ ಕಾಣೆಯಾಗಿದ್ದಾನೆಂದು ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿತು. ನನ್ನ ಪತ್ನಿ ರೈಲಿನಲ್ಲಿ ಅವನನ್ನು ಹುಡುಕುತ್ತಾ ಹೋದಳು. ಆತ ಸಿಗದೇ ಇದ್ದಾಗ ಮಧ್ಯಾಹ್ನ 2.30ರ ವೇಳೆಗೆ ಹೊಳೆನರಸೀಪುರ ಬಳಿಯ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಅಲಾರಾಂ ಚೈನ್‌ ಎಳೆದಿದ್ದಾಳೆ. ಆದರೆ ಅವರೊಬ್ಬರಿಂದ ಅದನ್ನು ಎಳೆಯಲು ಸಾಧ್ಯವಾಗಿಲ್ಲ. ಅಲ್ಲಿ ಯಾವುದೇ ನಿಲ್ದಾಣವಿಲ್ಲದ ಕಾರಣ, ರೈಲು ಮಾವಿನಕೆರೆ ರೈಲು ನಿಲ್ದಾಣದಲ್ಲಿ ನಿಂತಿತು. ಆಗ ಸುಮಾರು 10 ಕಿಮೀ ದೂರದಲ್ಲಿ ಯೋಜಿತ್ ಬಿದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು. 

ರೈಲು ನಿಲ್ಲಿಸಲು ಚೈನ್ ಎಳೆಯುವಂತೆ ಪತ್ನಿ ಸಹ ಪ್ರಯಾಣಿಕರಿಗೆ ಮನವಿ ಮಾಡಿದರೂ ಯಾರೂ ಸಹಾಯ ಮಾಡಲಿಲ್ಲ. ಅಂತಿಮವಾಗಿ, ಅವಳು ಅದನ್ನು ಸ್ವತಃ ಮಾಡಿದಳು. ಎದೆನೋವು ಎಂದು ದೂರಿದ ನನ್ನ ಸೋದರ ಮಾವನನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ, ಹಾಗಾಗಿ ನನ್ನ ಕುಟುಂಬದೊಂದಿಗೆ ಕಡೂರಿಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಇನ್ನೊಬ್ಬರ ಜೀವ ಉಳಿಸಲು ಹೋದೆ.. ಆದರೆ ನನ್ನ ಮಗನ ಜೀವವನ್ನೇ ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. 

ಜಿಆರ್‌ಪಿ ಪೊಲೀಸರು ಮತ್ತು ಸವಿತಾ ಯೋಜಿತ್‌ನನ್ನು ಪತ್ತೆಹಚ್ಚಲು ಹಳಿಗಳ ಉದ್ದಕ್ಕೂ ಶೋಧ ನಡೆಸಿದರು. ಈ ಕುರಿತು ಮಾತನಾಡಿರುವ ಅವರು, “ನಾವು 10 ಕಿ.ಮೀ ಗಿಂತಲೂ ಹೆಚ್ಚು ದೂರ ಹಳಿ ಶೋಧ ನಡೆಸಿದ್ದೇವೆ. ಆದರೆ ಬಾಲಕನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ತಂದೆ ನಂತರ ನಮ್ಮೊಂದಿಗೆ ಸೇರಿಕೊಂಡರು ಮತ್ತು ಅವರು ಹುಡುಗನನ್ನು ಪತ್ತೆಹಚ್ಚಲು ಮಂಗಳವಾರ ಬೆಳಿಗ್ಗೆ 5.30 ರವರೆಗೆ ರಾತ್ರಿಯಿಡೀ ಕೆಲವು ಪೊಲೀಸರೊಂದಿಗೆ ಶೋಧ ನಡೆಸಿದರು. ಈ ವೇಳೆ ಬಾಲಕನ ತಾಯಿ ನಮಗೆ ಕಾಲುವೆ ಮತ್ತು ದಟ್ಟವಾದ ಕಾಡಿನ ಬಗ್ಗೆ ಸುಳಿವುಗಳನ್ನು ನೀಡಿದರು. ಅದನ್ನು ಅನುಸರಿಸಿ ನಾವು ಬೇರೆ ಮಾರ್ಗದಲ್ಲಿ ಶೋಧ ನಡೆಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗ ಪತ್ತೆಯಾದ. 

ಈ ವೇಳೆ ಆತ ಉಸಿರಾಡಲು ಏದುಸಿರು ಬಿಡುತ್ತಿದ್ದ. ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಎಂದು ಶೋಧ ತಂಡದ ಭಾಗವಾಗಿದ್ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com