ಬೆಂಗಳೂರು: ಸುಪಾರಿ ನೀಡಿ ತಂದೆ ಕೊಲೆ ಮಾಡಿಸಿದ್ದ ಪಾಪಿ ಮಗ ಸೇರಿ ಮೂವರ ಸೆರೆ

ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದ ಪಾಪಿ ಮಗ ಸೇರಿದಂತೆ ಮೂವರನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೃತ ತಂದೆ ನಾರಾಯಣಸ್ವಾಮಿ ಹಾಗೂ ಪಾಪಿ ಮಗ ಮಣಿಕಂಠ
ಮೃತ ತಂದೆ ನಾರಾಯಣಸ್ವಾಮಿ ಹಾಗೂ ಪಾಪಿ ಮಗ ಮಣಿಕಂಠ

ಬೆಂಗಳೂರು: ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದ ಪಾಪಿ ಮಗ ಸೇರಿದಂತೆ ಮೂವರನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಪಾರ್ಟ್ ಮೆಂಟ್ ವೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ತಂದೆ ನಾರಾಯಣಸ್ನಾಮಿಯನ್ನು ಕೊಲೆ ಮಾಡಿಸಿದ್ದ ಪುತ್ರ ಮಣಿಕಂಠ ಹಾಗೂ ಸುಪಾರಿ ಪಡೆದ ಶಿವಕುಮಾರ್, ನವೀನ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ. 

ಕಳೆದ ಫೆ.13 ರಂದು ಅಪಾರ್ಟ್ ಮೆಂಟ್ ನ ವಾಹನ ನಿಲುಗಡೆ ಪ್ರದೇಶದಲ್ಲಿ ನಾರಾಯಣಸ್ವಾಮಿ ಅವರ ಕೊಲೆ ಆಗಿತ್ತು. ಈ ಕೊಲೆಗೆ ಹಂತಕ ನವೀನ್ ಕುಮಾರ್ ಗೆ ಮುಂಗಡ 1 ಲಕ್ಷ ನೀಡಿದ್ದ ಮಣಿಕಂಠ, ತನ್ನ ತಂದೆಯನ್ನು ಕೊಲೆ ಮಾಡಲು 1 ಕೋಟಿ ರೂ. ಸುಪಾರಿ ನೀಡಿದ್ದ ಎಂದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಮಣಿಕಂಠ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿ ಜಾಮೀನನ ಮೇಲೆ ಹೊರಗೆ ಬಂದು ಎರಡು ವಿವಾಹವಾಗಿದ್ದು, ದಂಪತಿಗೆ ಒಂದು ಹೆಣ್ಣು ಮಗುವಿದೆ ಎಂದು ಡಿಸಿಪಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com