ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ಕಟ್ಟಿ ಹಾಕಿ ಹಣ, ಚಿನ್ನಾಭರಣ ದರೋಡೆ

ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ ಕಾಲು ಕಟ್ಟಿ ಬಾಯಿ ಬಿಗಿದು ದರೋಡೆ ಮಾಡಿರುವ ಘಟನೆ ನಗರದ ಕೆಎಸ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ ಕಾಲು ಕಟ್ಟಿ ಬಾಯಿ ಬಿಗಿದು ದರೋಡೆ ಮಾಡಿರುವ ಘಟನೆ ನಗರದ ಕೆಎಸ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳವಾರ  ಲಕ್ಷ್ಮಿ (57) ಎಂಬುವರು ಮನೆಯಲ್ಲಿದ್ದಾಗ ಈ ಕೃತ್ಯ ನಡೆಸಿದ್ದಾರೆ. ಲಕ್ಷ್ಮಿ ಅವರ ಮಗಳು ಡಾ.ವೈಷ್ಣವಿ ಸುರೇಶ್ ಅವರ ಕ್ಲಿನಿಕ್‌ಗೆ ತೆರಳಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಮನೆಗೆ ನುಗ್ಗಿ 3.5 ಲಕ್ಷ ನಗದು, ಮೊಬೈಲ್ ಸೇರಿದಂತೆ 7.5 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.

ವೈದ್ಯೆ ವೈಷ್ಣವಿ ಕಳೆದ ಒಂದು ತಿಂಗಳಿನಿಂದ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಬಳಿಯೇ ಇದ್ದರು.  ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಗಳು ಸಂತ್ರಸ್ತೆಯ ಬಾಯಿ ಮುಚ್ಚಿಸಲು ಪ್ಲಾಸ್ಟರ್ ಬಳಸಿದ್ದಾರೆ.

ಈ ಸಂಬಂಧ ಡಾ ವೈಷ್ಣವಿ ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com