
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆ ಚೇಂಬರ್ ಹೊರಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪಕ್ಕದಲ್ಲೆ ಕಚೇರಿಯನ್ನು ಹೊಂದಲು ಬಯಸಿದ್ದಾರೆ.
ಶಿವಕುಮಾರ್ ಅವರ ಹೊಸ ಕಚೇರಿಯು ವಿಧಾನಸೌಧದ ಗೇಟ್ನ ಪಶ್ಚಿಮ ಭಾಗದ ಮೊದಲ ಮಹಡಿಯಲ್ಲಿದ್ದು, ಅಲ್ಲಿಂದ ಎಲ್ಲಾ ಶಾಸಕರು, ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸದನವನ್ನು ಪ್ರವೇಶಿಸುತ್ತಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಕಚೇರಿಗಳು ಮೂರನೇ ಮಹಡಿಯಲ್ಲಿವೆ. ಮುಖ್ಯಮಂತ್ರಿಗಳು ಪಶ್ಚಿಮ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಎದುರಾಗಿದ್ದರೆ, ಕರ್ನಾಟಕ ಹೈಕೋರ್ಟ್ಗೆ ಎದುರಾಗಿರುವ ಪೂರ್ವ ಭಾಗದಲ್ಲಿ ಡಿಸಿಎಂ ಇದ್ದಾರೆ.
ದಶಕಗಳಿಂದ, ಮುಖ್ಯಮಂತ್ರಿಗಳು ವಿಧಾನಸಭೆ ಚೇಂಬರ್ನ ಹೊರಗಿನ ಮೊದಲ ಮಹಡಿಯಲ್ಲಿ ಹೆಚ್ಚುವರಿ ಕಚೇರಿಯನ್ನು ಪಡೆದುಕೊಳ್ಳುವ ಸವಲತ್ತು ಹೊಂದಿದ್ದರು. ಇದರಿಂದ ಅವರು ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು, ವಿಶೇಷವಾಗಿ ವಿಧಾನಸಭೆ ಅಧಿವೇಶನಗಳಲ್ಲಿ ಭಾಗವಹಿಸಲು ನೆರವಾಗುತ್ತಿತ್ತು.
ಆದರೆ, ಈ ಹಿಂದೆ ಯಾವುದೇ ಉಪಮುಖ್ಯಮಂತ್ರಿ ತಮ್ಮ ಕಚೇರಿಯನ್ನು ವಿಧಾನಸಭೆಯ ಚೇಂಬರ್ ಪಕ್ಕದಲ್ಲೇ ಹೊಂದಿರಲಿಲ್ಲ. ಆದಾಗ್ಯೂ, ಈ ಬಾರಿ, ಶಿವಕುಮಾರ್ ಅವರು ತಮ್ಮ ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು ತನಗೂ ಅಲ್ಲಿಯೇ ಕಚೇರಿ ಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿವೆ.
ಶಿವಕುಮಾರ್ ಅವರು ವಿಧಾನಸಭೆ ಚೇಂಬರ್ನ ಎಡ ಮೂಲೆಯಲ್ಲಿರುವ ಕೊಠಡಿಯನ್ನು ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಅದನ್ನು ಈಗ ಬಳಸುತ್ತಿದ್ದಾರೆ.
Advertisement