ಕೊಪ್ಪಳ: ದುರಂತ ಘಟನೆಯೊಂದರಲ್ಲಿ, ಕೊಪ್ಪಳದಲ್ಲಿ ಗಂಟಲಿನಲ್ಲಿ ಆಹಾರ ಸಿಲುಕಿದ ಪರಿಣಾಮ ಉಸಿರುಗಟ್ಟಿ ವಿಕಲಚೇತನ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
ಮೃತ ಬಾಲಕನನ್ನು 14 ವರ್ಷದ ಆಂಜನೇಯ ಎಂದು ಗುರುತಿಸಲಾಗಿದೆ.
ಬಾಲಕ ಮೃತಪಟ್ಟ ಎರಡು ಗಂಟೆಗಳ ನಂತರ ಆತನ ಪೋಷಕರಿಗೆ ಈ ವಿಚಾರ ತಿಳಿದಿದೆ.
ಪೊಲೀಸರ ಪ್ರಕಾರ, ಬಾಲಕನ ತಾಯಿ ಪ್ರತಿದಿನದಂತೆ ಆತನಿಗೆ ಊಟ ಬಡಿಸಿ, ಜಮೀನಿನಲ್ಲಿ ಕೆಲಸ ಮಾಡಲು ಹೊರಗೆ ಹೋಗಿದ್ದರು.
ಊಟ ಮಾಡುವಾಗ ಗಂಟಲಲ್ಲಿ ಆಹಾರ ಸಿಕ್ಕಿಹಾಕಿಕೊಂಡಿದ್ದು, ನೀರು ಕುಡಿಯಬೇಕು ಎಂದು ಅರಿಯದ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ.
ಘಟನೆ ಸಂಬಂಧ ಕನಕಗಿರಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement