
ಪಿಯೂಷ್ ಗೋಯಲ್
ಬೆಂಗಳೂರು: ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಘನತೆ ತಂದುಕೊಟ್ಟ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
2 ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಸಚಿವ ಪಿಯೂಷ್ ಗೋಯಲ್ ಬೆಂಗಳೂರಿನಲ್ಲಿ ಶನಿವಾರ ನಡೆದ ಆರ್ಯ ವೈಶ್ಯ ಸಮುದಾಯದ ವ್ಯಾಪಾರಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಯೂಷ್ ಗೋಯಲ್ ಅವರು, ‘ಸ್ವಚ್ಛ ಭಾರತ’ದ ಪ್ರಧಾನಿಯವರ ಬದ್ಧತೆಯನ್ನು ಲೇವಡಿ ಮಾಡಿದವರಿಗೆಲ್ಲ, ಭಾರತವು ಸಮಾಜದ ಪ್ರತಿಯೊಂದು ವರ್ಗಕ್ಕೂ ಒದಗಿಸುವ ರಾಷ್ಟ್ರವಾಗಬೇಕೆಂದು ಜಗತ್ತಿಗೆ ಸಂದೇಶವಾಗಿತ್ತು ಎಂದು ಹೇಳಿದರು.
PM Modi is the only Prime Minister who has brought dignity to the marginalised community of society. It is a matter of collective shame that for over 67yrs after independence, half the population of the country didn't have toilets...: Union Minister Piyush Goyal, Bengaluru pic.twitter.com/mr0ksCx4UZ
— ANI (@ANI) March 18, 2023
ಅಂತೆಯೇ, 'ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಘನತೆ ತಂದುಕೊಟ್ಟ ಏಕೈಕ ಪ್ರಧಾನಿ ಮೋದಿ. ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ದೇಶದ ಅರ್ಧದಷ್ಟು ಜನಸಂಖ್ಯೆಗೆ ಶೌಚಾಲಯವೇ ಇರಲಿಲ್ಲ ಎಂಬುದು ಸಾಮೂಹಿಕ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.
Karnataka | To all those who made fun of PM's commitment to 'Swachh Bharat', it was a message for the world that India wishes to be a nation that provides for every section of society...: Union Minister Piyush Goyal, Bengaluru
— ANI (@ANI) March 18, 2023
ಇನ್ನು 2 ದಿನಗಳ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇಂದು ರಾತ್ರಿ ಬೆಂಗಳೂರಿನಲ್ಲಿ ಆರ್ಯ ವೈಶ್ಯ ಸಮುದಾಯದ ವ್ಯಾಪಾರಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಾಳೆ ಬೆಳಗ್ಗೆ 10.30ಕ್ಕೆ ಸಚಿವರು ಹುಬ್ಬಳ್ಳಿಗೆ ತೆರಳಿ ಅಲ್ಲಿ ದೇಶಪಾಂಡೆ ಇಂಕ್ಯುಬೇಷನ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 11.15ಕ್ಕೆ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ.
Minister @PiyushGoyal is on a two day visit to Karnataka for a range of meetings & interactions in Bengaluru, Hubli & Belagavi.
— Piyush Goyal Office (@PiyushGoyalOffc) March 18, 2023
He will also be visiting the world’s longest railway platform at Hubli Railway Station recently inaugurated by PM @NarendraModi ji. pic.twitter.com/6FNx3zj0w6
ಬಳಿಕ ಮಧ್ಯಾಹ್ಮ 1 ಗಂಟೆಗೆ ಹುಬ್ಬಳ್ಳಿಯ ವಿಶ್ವದ ಅತೀ ದೊಡ್ಡ ರೈಲ್ವೇ ಪ್ಲಾಟ್ ಫಾರ್ಮ್ ಗೆ ಭೇಟಿ ನೀಡಲಿದ್ದು, 1.30ಕ್ಕೆ CAಗಳು ಮತ್ತು ICAI ಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಳಗಾವಿಗೆ ತೆರಳಲಿರುವ ಸಚಿವರು ಅಲ್ಲಿ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ನ ವ್ಯಾಪಾರ ಮತ್ತು ವಾಣಿಜ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.