ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್'ನನ್ನು ದರೋಡೆ ಮಾಡಿರುವ ಘಟೆ ನಗರದಲ್ಲಿ ನಡೆದಿದೆ.
ಆನ್ ಲೈನ್ ಮೂಲಕ ಆರೋಪಿಗಳು ಫುಡ್ ಆರ್ಡರ್ ಮಾಡಿದ್ದಾರೆ. ಇದರಂತೆ ಎ ಇಂದದೂರ್ ಎಂಬ ಫುಡ್ ಡೆಲಿವರಿ ಬಾಯ್ ಆಹಾರ ತಲುಪಿಸಲು ಸರ್ಜಾಪುರ ರಸ್ತೆಗೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆತನಿಗೆ ಕಿರುಕುಳ ನೀಡಿದ್ದು. ಬೆದರಿಕೆ ಹಾಗಿ ಆತನ ಖಾತೆಯಲ್ಲಿದ್ದ ರೂ.3,000ಯನ್ನು ಯುಪಿಐ ಮೂಲಕ ವರ್ಗಾಯಿಸಿಕೊಂಡಿದ್ದಾರೆ.
ಬಳಿಕ ಡೆಲಿವರಿ ಬಾಯ್ ಬಳಿಯಿದ್ದ ಮೊಬೈಲ್ ಫೋನ್'ನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಬೆಳ್ಳಂದೂರು ಪೊಲೀಶ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳನ್ನು ಸುರೇಶ್, ಮಹೇಶ್, ಮುಸ್ತಫಾ ಎಂದು ಗುರ್ತಿಸಲಾಗಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಸರ್ಜಾಪುರ ರಸ್ತೆಯ ದೊಡ್ಡಕನಹಳ್ಳಿಯ ಭೋಗನಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಸುಕಿನ 2.40 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
Advertisement