ವಿಧಾನಸಭೆ ಚುನಾವಾಣೆಯಲ್ಲಿ ಬಿಜೆಪಿಗೆ ಸೋಲು: ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ ಕಾರ್ಯಪ್ಪ ರಾಜೀನಾಮೆ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಭಾನುವಾರ ರಾಜೀನಾಮೆ ನೀಡಿದ್ದಾರೆ. 
ಟಿಪ್ಪು ನಿಜಕನಸುಗಳು ಮತ್ತು ಲೇಖಕ-ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ
ಟಿಪ್ಪು ನಿಜಕನಸುಗಳು ಮತ್ತು ಲೇಖಕ-ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ
Updated on

ಮೈಸೂರು: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಭಾನುವಾರ ರಾಜೀನಾಮೆ ನೀಡಿದ್ದಾರೆ. 

ಮೇ 14ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ‘ನನ್ನನ್ನು ರಂಗಾಯಣ ನಿರ್ದೇಶಕರನ್ನಾಗಿ ನೇಮಿಸಿದ್ದ ಸರ್ಕಾರ ಚುನಾವಣೆಯಲ್ಲಿ ಸೋತಿದೆ. ನಾನು ಜನರ ಆದೇಶವನ್ನು ಗೌರವಿಸುತ್ತೇನೆ ಮತ್ತು ನೈತಿಕ ಹೊಣೆ ಹೊತ್ತು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದಿದ್ದಾರೆ.

ಕಾರ್ಯಪ್ಪ ಅವರು ಸಂಸ್ಥೆಯ ನಿರ್ದೇಶಕರಾಗಿದ್ದಾಗ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಆಗಿ ಅವರ ಕಲ್ಯಾಣ ಕಾರ್ಯಕ್ರಮಗಳನ್ನು, ಅವರ ಬೆಂಬಲಿಗರು, ಪ್ರಗತಿಪರ ಚಿಂತಕರು ಮತ್ತು ಈ ಭಾಗದ ಸಾಹಿತಿಗಳು ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಟೀಕಿಸಿದ್ದರು.

ಸಿದ್ದರಾಮಯ್ಯನವರು ಆರಂಭಿಸಿದ ಟಿಪ್ಪು ಜಯಂತಿಯನ್ನು ಬಹಿರಂಗವಾಗಿ ಟೀಕಿಸಿದ ಕಾರ್ಯಪ್ಪ ಅವರು ಮೈಸೂರು ಅರಸರ ಮೇಲೆ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ಬರೆದು ಕರ್ನಾಟಕದಾದ್ಯಂತ ಹಲವಾರು ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದರು. 2019ರ ಡಿಸೆಂಬರ್ 27ರಂದು ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 2019ರ ಡಿಸೆಂಬರ್ 31 ರಂದು ಅಧಿಕಾರ ವಹಿಸಿಕೊಂಡರು.

ಕಾರ್ಯಪ್ಪ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, 'ನಾನು ರಂಗಾಯಣಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಅದರ ಜನಪ್ರಿಯತೆಯನ್ನು ವಿಶ್ವದಾದ್ಯಂತ ಹರಡಿದ್ದೇನೆ. ಹಣದ ಕೊರತೆಯಿರುವ ರಂಗಭೂಮಿ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ನಾನು ಸುಧಾರಿಸಿದ್ದೇನೆ. ನನ್ನ ಪ್ರಯತ್ನದಿಂದಾಗಿ ರಂಗಾಯಣದ ಬ್ಯಾಂಕ್‌ನಲ್ಲಿ 2.09 ಕೋಟಿ ರೂ. ಠೇವಣಿ ಮತ್ತು 1.57 ಕೋಟಿ ರೂ. ಉಳಿತಾಯದ ಹಣವಿದೆ' ಎಂದು ಹೇಳಿದ್ದಾರೆ.

ಸಂಸ್ಥೆಯ ಪ್ರದರ್ಶನ, ದಾನಿಗಳ ನೆರವು, ಅನುದಾನ ಇತ್ಯಾದಿಗಳನ್ನು ಮಿತವ್ಯಯಮಾಡಿ ಉಳಿಕೆಮಾಡಲಾಗಿದೆ. ಸರ್ಕಾರದ ಇಡುಗಂಟು ಮೊತ್ತ 4 ಕೋಟಿ ರೂ. ಇದ್ದು, ಬಡ್ಡಿ ಮೊತ್ತ ₹50 ಲಕ್ಷ ಸಂಸ್ಥೆಗೆ ಸಿಗಲಿದೆ. ಒಟ್ಟು 4.16 ಕೋಟಿ ರೂ. ಮೊತ್ತ ಸಂಸ್ಥೆಯ ಖಾತೆಯಲ್ಲಿದೆ. ರಾಜ್ಯದ ಬೇರೆ ರಂಗಾಯಣ ಸಂಸ್ಥೆಗಳ ಖಾತೆಯಲ್ಲಿ 15 ಲಕ್ಷ ರೂ. ಕೂಡ ಉಳಿತಾಯ ಇಲ್ಲ. 3 ವರ್ಷ ಹಗಲಿರುಳು ದುಡಿದು ಮೈಸೂರು ರಂಗಾಯಣದ ಆರ್ಥಿಕ ಸ್ಥಿತಿ ಭದ್ರಪಡಿಸಿದ್ದೇನೆ’ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com