ಮಂಗಳೂರು: ಮಲ್ಲಮಾರ್ ಬೀಚ್ನಲ್ಲಿ ಬಾಗಲಕೋಟೆಯ ಯುವಕ ಸಮುದ್ರ ಪಾಲು, ಇಬ್ಬರು ಸ್ನೇಹಿತರ ರಕ್ಷಣೆ
ಬಾಗಲಕೋಟೆಯ ಯುವಕನೊಬ್ಬ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದು, ದೈತ್ಯ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದ ಆತನ ಇಬ್ಬರು ಸ್ನೇಹಿತರನ್ನು ಇಲ್ಲಿಗೆ ಸಮೀಪದ ಮಲ್ಲಮಾರ್ ಬೀಚ್ನಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 19th September 2023 08:58 AM | Last Updated: 19th September 2023 08:58 AM | A+A A-

ಪ್ರಾತಿನಿಧಿಕ ಚಿತ್ರ
ಮಂಗಳೂರು: ಬಾಗಲಕೋಟೆಯ ಯುವಕನೊಬ್ಬ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದು, ದೈತ್ಯ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದ ಆತನ ಇಬ್ಬರು ಸ್ನೇಹಿತರನ್ನು ಇಲ್ಲಿಗೆ ಸಮೀಪದ ಮಲ್ಲಮಾರ್ ಬೀಚ್ನಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮಾಂತೇಶ್ (29) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಬೀಚ್ಗೆ ಹೋಗಿದ್ದಾಗ ಮೂವರು ಸ್ನೇಹಿತರು ದೈತ್ಯ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾರವಾರ: ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ
ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಮಾಂತೇಶ್ ಕೊಚ್ಚಿಕೊಂಡು ಹೋಗಿದ್ದಾರೆ.
ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.