ಚಾಮರಾಜನಗರ: ಆನೆಗೆ ಡಿಕ್ಕಿ ಹೊಡೆದಿದ್ದ ವಾಹನ ಪತ್ತೆ ಮಾಡುವಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ.
ಮಾರ್ಚ್ 29 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯ ರಸ್ತೆಯ ಪಕ್ಕದಲ್ಲಿ ದಂಡ ಮುರಿದ ಸ್ಥಿತಿಯಲ್ಲಿ ಆನೆ ಬಿದ್ದಿರುವುದು ಪತ್ತೆಯಾಗಿತ್ತು.
ವೇಗವಾಗಿ ಬಂದ ವಾಹನವೊಂದು ಆನೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಇದರಂತೆ ಆನೆಗೆ ಡಿಕ್ಕಿ ಹೊಡೆದ ವಾಹನದ ಪತ್ತೆಗೆ ಶ್ವಾನ ದಳವನ್ನೂ ನೇಮಿಸಲಾಗಿತ್ತು. ಆದರೆ ರಕ್ತದ ಕಲೆಗಳು ಸ್ವಲ್ಪ ದೂರದಲ್ಲಿ ಮಾತ್ರ ಕಂಡುಬಂದ ಹಿನ್ನೆಲೆಯಲ್ಲಿ ವಾಹನ ಪತ್ತೆ ಯಶಸ್ವಿಯಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ನಡೆದಿರುವುದು ಅರಣ್ಯ ಪ್ರದೇಶದ ಹೊರಭಾಗವಾಗಿದ್ದರಿದ, ಸುತ್ತಮುತ್ತ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ವಾಹನ ಪತ್ತೆ ಕಷ್ಟಕವಾಗಿದೆ ಎಂದು ತಿಳಿಸಿದ್ದಾರೆ.
Advertisement