ಅಕ್ರಮ ಬಡಾವಣೆ ವಿರುದ್ಧ ಬಿಡಿಎ ನೀಡಿದ್ದ ನೋಟಿಸ್ ಕಣ್ಮರೆ!

ಅನಧಿಕೃತ ಲೇಔಟ್‌ನಲ್ಲಿ ನಿವೇಶನಗಳನ್ನು ಖರೀದಿಸಿ ಆಮಿಷಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಬಿಡಿಎ ಹಾಕಿದ್ದ ನೋಟಿಸ್ ನ್ನು ಅಪರಿಚಿತ ಕಿಡಿಗೇಡಿಗಳು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ಬಿಲ್ಡರ್‌ಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಬಿಡಿಎ
ಬಿಡಿಎ
Updated on

ಬೆಂಗಳೂರು: ಅನಧಿಕೃತ ಲೇಔಟ್‌ನಲ್ಲಿ ನಿವೇಶನಗಳನ್ನು ಖರೀದಿಸಿ ಆಮಿಷಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಬಿಡಿಎ ಹಾಕಿದ್ದ ನೋಟಿಸ್ ನ್ನು ಅಪರಿಚಿತ ಕಿಡಿಗೇಡಿಗಳು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ಬಿಲ್ಡರ್‌ಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಸಾರ್ವಜನಿಕರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿ ನಿವೇಶನ ಖರೀದಿಸದಂತೆ ಎಂದು ಬುಧವಾರ ನೋಟಿಸ್ ಹಾಕಲಾಗಿತ್ತು. ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ಹೋಬಳಿಯ ಪಟ್ಟಂದೂರಿನ ಅಗ್ರಹಾರ ಗ್ರಾಮದ ಸರ್ವೆ ನಂಬರ್ 19/2ರಲ್ಲಿ ಅನಧಿಕೃತ ಬಡಾವಣೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂಬ ದೂರು ಬಂದಿತ್ತು. ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ 1961 ರ ಸೆಕ್ಷನ್ 15 ರ ಪ್ರಕಾರ, ಬಿಡಿಎ ಭೂಮಿಯನ್ನು ಅಭಿವೃದ್ಧಿಪಡಿಸಲು ಯಾವುದೇ ಅನುಮತಿ ನೀಡಿಲ್ಲ ಮತ್ತು ಆದ್ದರಿಂದ ಅಲ್ಲಿ ಸೈಟ್‌ಗಳನ್ನು ಖರೀದಿಸಲು ಯೋಜಿಸುತ್ತಿರುವ ಜನರಿಗೆ ಎಚ್ಚರಿಕೆ ನೀಡಿ ನೋಟಿಸ್ ಅನ್ನು ಹಾಕಲಾಗಿತ್ತು ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ
ಅಕ್ರಮವಾಗಿ ಬಿಡಿಎ ನಿವೇಶನ ಖರೀದಿಸುವವರಿಗೆ ಸರ್ಕಾರದಿಂದ ಶುಲ್ಕ ನಿಗದಿ

ಗೋಡೆಯ ಮೇಲೆ ಹಾಕಿದ ನೋಟೀಸ್ ಒಂದು ದಿನದ ನಂತರ ನಿಗೂಢವಾಗಿ ಕಣ್ಮರೆಯಾಗಿದೆ. ಇದರಲ್ಲಿ ಕೆಲವು ಬಿಲ್ಡರ್ ಮಾಫಿಯಾಗಳ ಕೈವಾಡದಂತೆ ತೋರುತ್ತಿದೆ ಏಕೆಂದರೆ ಅಂತಹ ನೋಟಿಸ್ ಹಾಕಿದರೆ ಅವರು ಗ್ರಾಹಕರನ್ನು ಕಳೆದುಕೊಳ್ಳುತ್ತಾರೆ ಎಂದು ಅಧಿಕಾರಿ ಹೇಳಿದರು.

ಅಕ್ರಮ ಲೇಔಟ್ ನಿರ್ಮಿಸಿ ಪೇಯಿಂಗ್ ಗೆಸ್ಟ್ ದಂಧೆಯಲ್ಲಿ ತೊಡಗಿರುವ ದುಷ್ಕರ್ಮಿಗಳು ಕಾನೂನು ಆಯ್ಕೆಗಳನ್ನು ದುರುಪಯೋಗಪಡಿಸಿಕೊಂಡು ತಾತ್ಕಾಲಿಕ ತಡೆ ಅಥವಾ ಅಧಿಕಾರಿಗಳ ಕ್ರಮಕ್ಕೆ ಅಡ್ಡಿಪಡಿಸಲು ಮುಂದಾಗಿದ್ದಾರೆ ಎಂದು ಕಾರ್ಯಕರ್ತರು ಮತ್ತು ನಿವಾಸಿಗಳು ಈ ಹಿಂದೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು. .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com