ವಿಜಯಪುರ: ಕಬ್ಬು ಕಟಾವು ಯಂತ್ರ- ಕಾರಿನ ನಡುವೆ ಭೀಕರ ಅಪಘಾತ; ಐವರ ದುರ್ಮರಣ

ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.
ಅಪಘಾತ ದೃಶ್ಯ
ಅಪಘಾತ ದೃಶ್ಯ
Updated on

ವಿಜಯಪುರ: ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಐವರು ದುರ್ಮರಣ ಹೊಂದಿದ್ದಾರೆ. ಕಬ್ಬು ಕಟಾವು ಮಷಿನ್​ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ.

ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.

ಯಾದಗಿರಿಯಲ್ಲಿ ಕನ್ಯೆ ನೋಡಲು ಹೋಗಿದ್ದು, ವಾಪಸ್ ಆಗುತ್ತಿದ್ದ ವೇಳೆ ತೊಗರಿ ಕಟಾವು ಮಷಿನ್​​ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೆಸಿಬಿ ಮೂಲಕ ಕಾರಿನಲ್ಲಿದ್ದ ಶವಗಳನ್ನು ಹೊರತೆಗೆಯಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಅಪಘಾತ ದೃಶ್ಯ
Video: ಕಾರಿನ ರೂಫ್ ಮೇಲೆ ನಾಯಿಗಳ ಕೂರಿಸಿ 'ಹೇರ್ ಸ್ಟೈಲಿಸ್ಟ್' ಹುಚ್ಚು ಸಾಹಸ; ಬೆಂಗಳೂರು ಪೊಲೀಸರಿಂದ ತಕ್ಕಶಾಸ್ತಿ!

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com