5 ವರ್ಷ ನಮ್ಮದೇ ಸರ್ಕಾರ ಇರಲಿದೆ, ಗ್ಯಾರಂಟಿ ಯೋಜನೆಗಳು ರದ್ದಾಗದು: ಸಚಿವ ಕೆಜೆ.ಜಾರ್ಜ್

ರಾಜ್ಯದಲ್ಲಿ 5 ವರ್ಷ ನಮ್ಮ ಪಕ್ಷವೇ ಅಧಿಕಾರದಲ್ಲಿರದಿದ್ದು, ಗ್ಯಾರಂಟಿ ಯೋಜನೆಗಳು ರದ್ದುಗೊಳ್ಳುವುದಿಲ್ಲ ಎಂದು ಇಂಧನ ಸಚಿವ ಕೆಜೆ.ಜಾರ್ಜ್ ಅವರು ಭಾನುವಾರ ಹೇಳಿದರು.
ಕೆಜೆ.ಜಾರ್ಜ್
ಕೆಜೆ.ಜಾರ್ಜ್

ಮಂಗಳೂರು: ರಾಜ್ಯದಲ್ಲಿ 5 ವರ್ಷ ನಮ್ಮ ಪಕ್ಷವೇ ಅಧಿಕಾರದಲ್ಲಿರದಿದ್ದು, ಗ್ಯಾರಂಟಿ ಯೋಜನೆಗಳು ರದ್ದುಗೊಳ್ಳುವುದಿಲ್ಲ ಎಂದು ಇಂಧನ ಸಚಿವ ಕೆಜೆ.ಜಾರ್ಜ್ ಅವರು ಭಾನುವಾರ ಹೇಳಿದರು.

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಕೊಡಗಿನಲ್ಲಿ ರಾಜಕೀಯ ಆರಂಭಿಸಿದ ಬಳಿಕ ಸೋಲಿನ ಜೊತೆಗೆ ಗೆಲುವಿನ ರುಚಿ ಕಂಡಿದ್ದೇನೆ .ಕರಾವಳಿ ಪ್ರದೇಶ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅದನ್ನು ಹಿಂಪಡೆಯಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿ. ಐದು ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಸಲಿದೆ ಎಂದು ಹೇಳಿದರು.

ಇದೇ ವೇಳೆ ಮೋದಿ ಸರ್ಕಾರವನ್ನು ಟೀಕಿಸಿದ ಅವರು, ತಮ್ಮ ವೈಫಲ್ಯಗಳನ್ನು ಮರೆಮಾಚಲು ಕೇಂದ್ರದ ಬಿಜೆಪಿ ಸರ್ಕಾರ ಸಾಕಷ್ಟು ಭರವಸೆಗಳನ್ನು ನೀಡಿತು. ಆದರೆ, ಎಂದಿಗೂ ಅವುಗಳನ್ನು ಈಡೇರಿಸಲಿಲ್ಲ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com