ಬೆಂಗಳೂರು: ಕುವೈತ್ನಿಂದ ಆಗಮಿಸಿದ್ದ ಭಾರತೀಯ ಪ್ರಯಾಣಿಕರೊಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡೆದ ಕಸ್ಟಮ್ಸ್ ಅಧಿಕಾರಿಗಳು, ಆತನಿಂದ ರೂ. 17 ಲಕ್ಷಕ್ಕೂ ಹೆಚ್ಚಿನ ಮೌಲ್ಯದ 279. 5 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್, ಗುರುವಾರ ಕುವೈತ್ನಿಂದ ಜೆ 9-431 ವಿಮಾನದ ಮೂಲಕ ಆಗಮಿಸಿದ ಭಾರತೀಯ ಪ್ರಯಾಣಿಕರೊಬ್ಬರನ್ನು ತಡೆದಿದ್ದು, ಅಲಂಕಾರಿಕ ಧೂಪದ್ರವ್ಯದ ಕಂಟೇನರ್ನಲ್ಲಿ ಬಚ್ಚಿಟ್ಟು ಕತ್ತರಿಸಿದ ತುಂಡುಗಳಲ್ಲಿ ಕಚ್ಚಾ ಚಿನ್ನ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ತಿಳಿಸಿದೆ.
ರೂ.17,23,117 ಮೌಲ್ಯದ 279.5 ಗ್ರಾಂ ತೂಕದ ಚಿನ್ನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
Advertisement