ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್
Updated on

ಬೆಂಗಳೂರು: ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ರಾಮ ಮಂದಿರ ನಿರ್ಮಾಣ ರಾಜಕೀಯ ಪ್ರೇರಿತವಾದುದ್ದಾಗಿದ್ದು, ಮಂದಿರ ನಿರ್ಮಿಸುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ. ಬಿಜೆಪಿ ರಾಜಕೀಯ ಲಾಭಕ್ಕಾಗಿ ರಾಮ ಮಂದಿರವನ್ನು ನಿರ್ಮಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್
ಪ್ರತ್ಯೇಕ ರಾಷ್ಟ್ರ: ಡಿಕೆ.ಸುರೇಶ್ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಮರ್ಥನೆ; ಸಂಸದ ಸ್ಥಾನ ಅನರ್ಹತೆಗೆ ಬಿಜೆಪಿ ಆಗ್ರಹ

ಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಲಾದ ಸ್ಥಳವೂ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದ ಸ್ಥಳಕ್ಕಿಂತ ಭಿನ್ನವಾಗಿದೆ. ನಾವು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿಲ್ಲ. ಆದರೆ ಅದು ನಿರ್ಮಾಣಗೊಂಡಿರುವ ಸ್ಥಳ ಸರಿಯಲ್ಲ. ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಸ್ಥಳದಲ್ಲಿ ದೇವಾಲಯದ ಶೇ.40 ರಷ್ಟು ಭಾಗ ಮಾತ್ರ ಇದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್
ಗಿಗ್ ಕಾರ್ಮಿಕರಿಗೆ ಯುನಿವರ್ಸಲ್ ಐಡಿ ಕಾರ್ಡ್ ನೀಡುವ ಕುರಿತು ಚಿಂತನೆ: ಸಚಿವ ಸಂತೋಷ್ ಲಾಡ್

ರಾಮಮಂದಿರ ನಿರ್ಮಾಣ ಬಡತನ ನಿರ್ಮೂಲನೆಗೆ ದಾರಿ ಮಾಡಿಕೊಟ್ಟಿದೆಯೇ ಅಥವಾ ರೈತರಿಗೆ ಏನಾದರೂ ಪ್ರಯೋಜನವನ್ನು ತಂದಿದೆಯೇ ಎಂದು ಸಂತೋಷ್ ಲಾಡ್ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಈಗ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳತ್ತ ಗಮನಸೆಳೆದ ಲಾಡ್, ಅವರ ಸಮಸ್ಯೆಗಳನ್ನು ಪರಿಹರಿಸುವ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸಿದರು.

ರಾಮ ಮಂದಿರ ನಿರ್ಮಾಣ ಬಡತನ ನಿರ್ಮೂಲನೆ ಮಾಡಲಿದೆಯೇ? ಸಚಿವ ಸಂತೋಷ್ ಲಾಡ್
ಜನಾರ್ಧನ ರೆಡ್ಡಿ ಅಕ್ರಮ ಆಸ್ತಿ ಹೊಂದಿದ್ದು, ಶೀಘ್ರದಲ್ಲೇ ಅಮಿತ್ ಶಾಗೆ ಪತ್ರ ಬರೆಯುವೆ: ಅನಿಲ್ ಲಾಡ್

“ರಾಮಂದಿರದಿಂದ ನಿಮಗೇನು ಲಾಭ, ನಮ್ಮ ಸಹೋದರಿಯರಿಗೆ ಏನು ಲಾಭ? ಬಿಜೆಪಿಯವರು ಮಂದಿರದ ಆಧಾರದ ಮೇಲೆ ಮತ ಕೇಳುತ್ತಿರುವುದು ಏಕೆ? ರೈತರಿಗೆ ಲಾಭವಾಗಿದೆಯೇ? ಅವರಿಗೆ ಲಾಭವಾಗಿದ್ದರೆ, ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಬುಲ್ಡೋಜರ್‌ಗಳು ಏಕೆ? ಮತ್ತು ರೈತರ ವಿರುದ್ಧ ಅಶ್ರುವಾಯು ಬಳಸಲಾಗುತ್ತಿದೆಯೇ? ಸಚಿವರು ಕೇಳಿದ್ದಾರೆ. ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, "ರಾಮ ಮಂದಿರವನ್ನು ನಿರ್ಮಿಸಿದ ಸ್ಥಳವು 500 ವರ್ಷಗಳ ಹಿಂದೆ ರಾಮಲಲ್ಲಾ ಇದ್ದ ಸ್ಥಳವಾಗಿದೆ. ಇದೆಲ್ಲವನ್ನು ಖಚಿತಪಡಿಸಿಕೊಳ್ಳಲು ಸಂತೋಷ್ ಲಾಡ್ 500 ವರ್ಷಗಳ ಹಿಂದೆ ಹುಟ್ಟಿರಲಿಲ್ಲ. ಅವರಿಗೆ ರಾಜ್ಯದಲ್ಲಿ ಸಾಕಷ್ಟು ವಿಷಯಗಳಿವೆ. ಹಾಗೆ, ಅವರು ಅದರ ಮೇಲೆ ಗಮನ ಕೇಂದ್ರೀಕರಿಸಬೇಕು, ”ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com