ಕಂಬಳ ಕ್ರೀಡೆಗೆ ಹೈಟೆಕ್ ಟಚ್: ಸ್ವಯಂಚಾಲಿತ ಟೈಮ್ ಗೇಟ್, ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆ; ಅದಾನಿ ಫೌಂಡೇಶನ್ ದೇಣಿಗೆ

ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಕಂಬಳದಲ್ಲಿ (ಕೋಣಗಳ ಓಟ) ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಕಂಬಳ (ಸಂಗ್ರಹ ಚಿತ್ರ)
ಕಂಬಳ (ಸಂಗ್ರಹ ಚಿತ್ರ)

ಮಂಗಳೂರು: ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಕಂಬಳದಲ್ಲಿ (ಕೋಣಗಳ ಓಟ) ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.

ಪ್ರಸ್ತುತ, ಕಂಬಳದ ಹೆಚ್ಚಿನ ಕಾರ್ಯಕ್ರಮಗಳು 2-3 ದಿನಗಳವರೆಗೆ ವಿಸ್ತರಿಸುತ್ತಿದ್ದು, ಇದು ಕೋಣಗಳು, ಅವುಗಳ ನಿರ್ವಾಹಕರು ಮತ್ತು ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೋಣಗಳ ಜೋಡಿಗಳ ಸಂಖ್ಯೆಯು ತೀವ್ರವಾಗಿ ಹೆಚ್ಚಾಗುತ್ತಿದ್ದು, ಕೆಲ ಕಾರ್ಯಕ್ರಮಗಳಲ್ಲಿ 250 ಜೋಡಿಗಳಿಗೂ ಅಧಿಕ ಕೋಣಗಳ ಜೋಡಿಗಳು ಭಾಗಿಯಾದ ಉದಾಹರಣೆ ಕೂಡ ಇದೆ ಎಂದು ಹೇಳಲಾಗಿದೆ.

ಒಂದು ದಶಕದ ಹಿಂದೆ, ಕ್ರೀಡೆಯ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಲೇಜರ್ ಫಿನಿಶಿಂಗ್ ವ್ಯವಸ್ಥೆಯನ್ನು ಕ್ರೀಡೆಯಲ್ಲಿ ಪರಿಚಯಿಸಲಾಗಿತು. ಸಮಯವನ್ನು ಮತ್ತಷ್ಟು ಕಡಿತಗೊಳಿಸುವ ಸಲುವಾಗಿ, ಜಿಲ್ಲಾ ಕಂಬಳ ಸಮಿತಿಯು ಕುದುರೆ ರೇಸ್‌ನಲ್ಲಿ ಬಳಸುವ ಸ್ಟಾರ್ಟಿಂಗ್ ಬ್ಯಾರಿಯರ್‌ನ ಸಾಲಿನಲ್ಲಿ ಸ್ವಯಂಚಾಲಿತ ಟೈಮ್ ಗೇಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅದರಂತೆ ಪ್ರತಿಯೊಂದು ರೇಸಿಂಗ್ ಟ್ರ್ಯಾಕ್ ಎರಡು Suspended ಗೇಟ್‌ಗಳನ್ನು ಹೊಂದಿರುತ್ತದೆ. ಓಟ ಆರಂಭದ ಸಮಯ ಆರಂಭವಾಗುತ್ತಲೇ ಈ ಗೇಟ್ ಗಳು ತನ್ನಿಂದಾನೇ ತೆರೆದುಕೊಳ್ಳುತ್ತವೆ.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಈ ಕುರಿತು ಮಾತನಾಡಿ, 'ಕೆಲವು ಕೋಣಗಳು ಓಟ ಆರಂಭಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕಂಬಳದಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಅವು ಓಟವನ್ನು ಪ್ರಾರಂಭಿಸಲು ಒಂದು ಅಥವಾ ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಸಂಗತಿಗಳು ರೇಸ್ ಅನ್ನು ಮುಕ್ತಾಯಗೊಳಿಸುವಲ್ಲಿ ಅತಿಯಾದ ವಿಳಂಬಕ್ಕೆ ಕಾರಣವಾಗುತ್ತವೆ. ಹೊಸ ವ್ಯವಸ್ಥೆಯು ಅಂತಹ ವಿಳಂಬಗಳನ್ನು ನಿವಾರಿಸುತ್ತದೆ ಮತ್ತು 24 ಗಂಟೆಗಳ ಒಳಗೆ ಅದನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಹೊಸ ವ್ಯವಸ್ಥೆಯಲ್ಲಿ, ಕೋಣಗಳ ಹಿಡಿಯುವವರಿಗೆ ಓಟವನ್ನು ಪ್ರಾರಂಭಿಸಲು 5 ಅಥವಾ 10 ನಿಮಿಷಗಳು ಸಿಗುತ್ತವೆ ಎಂದು ಅವರು ಹೇಳಿದರು. 

ಅಂತೆಯೇ ನಿಗದಿತ ಸಮಯದೊಳಗೆ ಅವರು ಓಟವನ್ನು ಪ್ರಾರಂಭಿಸಲು ವಿಫಲರಾದರೆ, ರೆಫರಿ ಅವರಿಗೆ ಮತ್ತೊಂದು ಅವಕಾಶವನ್ನು ನೀಡುವ ಅಥವಾ ಅವರನ್ನು ಅನರ್ಹಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೊಸ ವ್ಯವಸ್ಥೆಯು ಟ್ರಾಫಿಕ್ ದೀಪಗಳನ್ನು (ಕೆಂಪು, ಹಳದಿ ಮತ್ತು ಹಸಿರು) ಹೊಂದಿದ್ದು, ಇದು ಆಟದ ಪ್ರಾರಂಭದ ಬಗ್ಗೆ ನಿರ್ವಾಹಕರನ್ನು ಎಚ್ಚರಿಸುತ್ತದೆ. ಫೆಬ್ರವರಿ 3 ರಂದು ಉಡುಪಿ ಜಿಲ್ಲೆಯ ಐಕಳ ಗ್ರಾಮದಲ್ಲಿ ನಡೆಯಲಿರುವ ಐಕಲಬ ಕಾಂತಬಾರೆ ಬೂದುಬಾರೆ ಕಂಬಳ ಎಂಬ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು. ಅದರ ಯಶಸ್ಸಿನ ಆಧಾರದ ಮೇಲೆ, ಭವಿಷ್ಯದಲ್ಲಿ ಎಲ್ಲಾ ಕಂಬಳ ಕಾರ್ಯಕ್ರಮಗಳಿಗೆ ಇದನ್ನು ವಿಸ್ತರಿಸಲಾಗುವುದು. ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ಕ್ರೀಡೆಯನ್ನು ನವೀಕರಿಸುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯವಾಗಲು ಸಹಾಯ ಮಾಡುತ್ತದೆ ಎಂದು ಶೆಟ್ಟಿ ಹೇಳಿದರು.

ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಅದಾನಿ ಫೌಂಡೇಶನ್ 10 ಲಕ್ಷ ರೂ ದೇಣಿಗೆ ನೀಡಿದ್ದು, ಬುಧವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಸಮಿತಿ ಅಧ್ಯಕ್ಷರಿಗೆ ಚೆಕ್ ಹಸ್ತಾಂತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com