ದೊಡ್ಡಬಳ್ಳಾಪುರ: ಅತ್ಯಾಧುನಿಕ ಎಲೆಕ್ಟ್ರೋರೈಜರ್ ಸೌಲಭ್ಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

'ಈ ಅತ್ಯಾಧುನಿಕ ಸೌಲಭ್ಯದಿಂದ ಕರ್ನಾಟಕ ಮತ್ತು ಭಾರತದ ಹಸಿರು ಇಂಧನ ವಲಯದ ಆಶಯಗಳನ್ನು ಸಾಕಾರಗೊಳಿಸಬಹುದು. ಹಸಿರು ಜಲಜನಕವನ್ನು ಉತ್ಪಾದಿಸುವ ಮೂಲಕ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ಮತ್ತು ಪವನ ಶಕ್ತಿಯನ್ನು ಸಂಯೋಜಿಸುವ ಮೂಲಕ ಭಾರತದ ಇಂಧನ ಭದ್ರತೆಗೆ ಉತ್ತೇಜನ ನೀಡುತ್ತವೆ'
ಪ್ರಲ್ಹಾದ್ ಜೋಶಿ, ಎಂ ಬಿ ಪಾಟೀಲ್ ಮತ್ತಿತರರು
ಪ್ರಲ್ಹಾದ್ ಜೋಶಿ, ಎಂ ಬಿ ಪಾಟೀಲ್ ಮತ್ತಿತರರು
Updated on

ದೊಡ್ಡಬಳ್ಳಾಪುರ: ಭಾರತವು ವಿಶ್ವದಲ್ಲಿ ಹಸಿರು ಇಂಧನ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗುವ ಸಾಮರ್ಥ್ಯವನ್ನು ಹೊಂದಿದ್ದು, 2030 ರ ವೇಳೆಗೆ ಭಾರತವು 60GW ನಿಂದ 100GW ವರೆಗಿನ ಎಲೆಕ್ಟ್ರೋಲೈಸರ್ ಸಾಮರ್ಥ್ಯ ಹೊಂದುವ ಸಾಧ್ಯತೆಯಿದೆ ಎಂದು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದೊಡ್ಡಬಳ್ಳಾಪುರದಲ್ಲಿ ಓಹ್ಮಿಯಂನ ಅತ್ಯಾಧುನಿಕ ಎಲೆಕ್ಟ್ರೋಲೈಜರ್ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸಂಪೂರ್ಣವಾಗಿ ಜೋಡಿಸಲಾದ ಮತ್ತು ಪರೀಕ್ಷಿಸಿದ 2GW ಎಲೆಕ್ಟ್ರೋಲೈಜರ್ ಸಿಸ್ಟಮ್‌ ಒದಗಿಸಲು ಸಿದ್ಧವಾಗಿದೆ. ಈ ಅತ್ಯಾಧುನಿಕ ಸೌಲಭ್ಯದಿಂದ ಕರ್ನಾಟಕ ಮತ್ತು ಭಾರತದ ಹಸಿರು ಇಂಧನ ವಲಯದ ಆಶಯಗಳನ್ನು ಸಾಕಾರಗೊಳಿಸಬಹುದು. ಹಸಿರು ಜಲಜನಕವನ್ನು ಉತ್ಪಾದಿಸುವ ಮೂಲಕ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ಮತ್ತು ಪವನ ಶಕ್ತಿಯನ್ನು ಸಂಯೋಜಿಸುವ ಮೂಲಕ ಭಾರತದ ಇಂಧನ ಭದ್ರತೆಗೆ ಉತ್ತೇಜನ ನೀಡುತ್ತವೆ ಎಂದು ಅವರು ಹೇಳಿದರು.

ಪ್ರಲ್ಹಾದ್ ಜೋಶಿ, ಎಂ ಬಿ ಪಾಟೀಲ್ ಮತ್ತಿತರರು
ಹೈಡ್ರೋಜನ್ ಇಂಧನ ಬಳಕೆಗೆ ಹಸಿರು ಕಾರಿಡಾರ್ ಪ್ರದೇಶ ಹೆಚ್ಚಿಸಲು ಸರ್ಕಾರ ಒಲವು

' ನವೀಕರಿಸಬಹುದಾದ ಇಂಧನ (RE) ಸ್ಥಾಪಿತ ಸಾಮರ್ಥ್ಯವು 2014 ರಲ್ಲಿದ್ದ 76 GW ನಿಂದ ಜೂನ್ 2024 ರವರೆಗೆ 195 GW ಗೆ ಎರಡೂವರೆ ಪಟ್ಟು ಹೆಚ್ಚಾಗಿದೆ. 2014 ರಲ್ಲಿದ್ದ ಸೌರ ಶಕ್ತಿ ಸಾಮರ್ಥ್ಯವು 3 GW ನಿಂದ 85 GW ಗೆ 30 ಪಟ್ಟು ಜಿಗಿತವನ್ನು ಕಂಡಿದೆ. ಈ ದಶಕದಲ್ಲಿ ಪವನ ಶಕ್ತಿ ಸಾಮರ್ಥ್ಯ 21 GW ನಿಂದ 46 GW ಗೆ ಹೆಚ್ಚಿದೆ ಎಂದು ಅಂಕಿ ಅಂಶ ಒದಗಿಸಿದ ಸಚಿವರು, ದೇಶೀಯ ಎಲೆಕ್ಟ್ರೋಲೈಜರ್ ತಯಾರಿಕೆಯು ಸ್ಥಿರವಾದ ಪೂರೈಕೆಯನ್ನು ಖಚಿತಪಡಿಸುತ್ತದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ ಸ್ವಾತಂತ್ರ್ಯವನ್ನು ಹೆಚ್ಚಿಸುತ್ತದೆ. ಇದು ಭಾರತವನ್ನು ಹೈಡ್ರೋಜನ್‌ ನ ಉತ್ಪಾದನೆ, ರಫ್ತು ಮತ್ತು ಬಳಕೆಯಲ್ಲಿ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ ಎಂದರು.

ಪ್ರಲ್ಹಾದ್ ಜೋಶಿ, ಎಂ ಬಿ ಪಾಟೀಲ್ ಮತ್ತಿತರರು
ಹಸಿರು ಇಂಧನ ಉತ್ಪಾದನೆಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ರಾಜಸ್ಥಾನ, ಮುಂಚೂಣಿ!

‘ಹಸಿರು ಜಲಜನಕದ ಸಾಮರ್ಥ್ಯ ಅಪಾರವಾಗಿದೆ. ಸಾರಿಗೆ, ಉಕ್ಕು ಉತ್ಪಾದನೆ ಮತ್ತು ಭಾರೀ ಉದ್ಯಮದಂತಹ ಡಿಕಾರ್ಬನೈಸಿಂಗ್ ವಲಯಗಳಿಗೆ ಇದು ಪ್ರಮುಖವಾಗಿದೆ. ಇದು ಹಾನಿಕಾರಕ ಇಂಗಾಲದ ಹೆಜ್ಜೆಗುರುತನ್ನು ಬಿಡದೆಯೇ ನಮ್ಮ ವಾಹನಗಳಿಗೆ ಇಂಧನವನ್ನು ನೀಡುತ್ತದೆ, ನಮ್ಮ ಕಾರ್ಖಾನೆಗಳಿಗೆ ಇಂಧನವನ್ನು ನೀಡುತ್ತದೆ ಮತ್ತು ನಮ್ಮ ಮನೆಗಳನ್ನು ಬೆಳಗಿಸುತ್ತದೆ. ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನಾ ಘಟಕಗಳಿಗೆ 2030 ರವರೆಗೆ ಐ ಎಸ್‌ ಟಿ ಎಸ್ ಶುಲ್ಕವನ್ನು ಮನ್ನಾ ಮಾಡುವುದರಿಂದ ಉದ್ಯಮವು ಪ್ರಯೋಜನ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಕ್ಷೇತ್ರವನ್ನು ಉತ್ತೇಜಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಇದರಿಂದ ಭಾರತವು ತನ್ನ ದೇಶೀಯ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ ವಿಶ್ವಕ್ಕೆ ವಿಶ್ವಾಸಾರ್ಹ ಪೂರೈಕೆ ಪಾಲುದಾರನಾಗಿ ಹೊರಹೊಮ್ಮುತ್ತದೆ.ಹಸಿರು ಜಲಜನಕದ ಬೇಡಿಕೆಯು ಭಾರತದಲ್ಲಿ ಎಲೆಕ್ಟ್ರೋಲೈಸರ್‌ ಗಳ ಬೇಡಿಕೆಯನ್ನು ಉತ್ತೇಜಿಸುತ್ತದೆ. 2030 ರ ವೇಳೆಗೆ ಭಾರತವು 60GW ನಿಂದ 100GW ವರೆಗಿನ ಎಲೆಕ್ಟ್ರೋಲೈಸರ್ ಸಾಮರ್ಥ್ಯ ಹೊಂದುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com