ಬಾಗಲಕೋಟೆ: ಬೈಕ್ ಹಾಗೂ ಟಂಟಂ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ದುರ್ಮರಣ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಾಗೂರು ಕ್ರಾಸ್ ಬಳಿ ಘಟನೆ ನಡೆದಿದೆ.
ಟಂಟಂ ವಾಹನದಲ್ಲಿದ್ದ ಬೇವಿನಮಟ್ಟಿ ಗ್ರಾಮದ ಮೂಲದ ಈರಪ್ಪ ಪವಾಡಗೌಡ (45) ಹಾಗೂ ಬೈಕ್ ಮೇಲಿದ್ದ ಲಿಂಗಸಗೂರು ತಾಲ್ಲೂಕಿನ ಬೋಗಾಪೂರದ ಅಭಿಷೇಕ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement