ಬೆಂಗಳೂರು: ಚಾಮರಾಜಪೇಟೆಯ ಛಲವಾದಿ ಪಾಳ್ಯದ ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮ್ಮ ಸಮಸ್ಯೆ ಬಗೆಹರಿಸುವಂತೆ ಮತ್ತು ಕುಡಿಯುವ ನೀರಿನ ನಲ್ಲಿಗೆ ಚರಂಡಿ ನೀರು ಸೇರ್ಪಡೆಯಾಗುವುದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಹಳೆ ಮನೆಗಳ ಪೈಪ್ಲೈನ್ ಸಂಪರ್ಕ ಕಳಪೆ ಮಟ್ಟದಲ್ಲಿದೆ ಎಂಬುದು ಮಂಡಳಿ ಸಮಜಾಯಿಷಿಯಾಗಿದೆ.
ಛಲವಾದಿ ಪಾಳ್ಯ ವಾರ್ಡ್ನ ಜೈ ಭೀಮ್ ನಗರದ ನಿವಾಸಿ ವಸಂತಕುಮಾರ್, ಕಳೆದ ಒಂದೂವರೆ ವರ್ಷಗಳಿಂದ ನೀರಿನ ನಲ್ಲಿಗಳಿಗೆ ಚರಂಡಿ ನೀರು ಹರಿದು ಬರುತ್ತಿರುವ ಸಮಸ್ಯೆಯನ್ನು ಸರಿಪಡಿಸಿಲ್ಲ. ಈಗ ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಅಧಿಕಾರಿಗಳು ಇದೀಗ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ.
ಕೊಳಕು, ಬಣ್ಣಬಣ್ಣದ ನೀರು ನಲ್ಲಿಗಳಲ್ಲಿ ಹರಿಯುತ್ತದೆ, ನಿವಾಸಿಗಳು ಟ್ಯಾಂಕ್ಗಳಿಂದ ನೀರನ್ನು ಸಂಗ್ರಹಿಸುವಂತೆ ಒತ್ತಾಯಿಸುತ್ತಾರೆ. ಅಧಿಕಾರಿಗಳು ಸಮಸ್ಯೆ ನಿವಾರಣೆ ಹೆಸರಿನಲ್ಲಿ ಒಮ್ಮೊಮ್ಮೆ ಬಂದರೂ ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸಿ, ವಾಲ್ವ್ಗಳನ್ನು ಪರಿಶೀಲಿಸುತ್ತಿದ್ದಾರೆ. ಹೊಸ ಅಧ್ಯಕ್ಷರು ಬಂದ ಮೇಲೆ ಸಮಸ್ಯೆ ಬಗೆಹರಿಸಿದ್ದಾರೆ. ಅವರು ಇನ್ನು ಮುಂದೆ ಶುದ್ಧ ನೀರನ್ನು ಪೂರೈಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಛಲವಾದಿ ಪಾಳ್ಯ ವಾರ್ಡ್ನ ಬಿಡಬ್ಲ್ಯುಎಸ್ಎಸ್ಬಿ ವಾಟರ್ ಇನ್ಸ್ಪೆಕ್ಟರ್ ಮಂಜುನಾಥ್, ಕುಡಿಯುವ ನೀರಿನ ನಲ್ಲಿಗಳಿಗೆ ಕೊಳಚೆ ನೀರು ಹರಿಯುತ್ತಿರುವುದಕ್ಕೆ ಹಳೆಯ ಸಂಪರ್ಕದ ಪೈಪ್ಗಳು ಹಾನಿಯಾಗಿರುವುದರಿಂದ ಆಗಿದ್ದು ಇದಕ್ಕೂ ಬಿಡಬ್ಲ್ಯುಎಸ್ಎಸ್ಬಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಪೈಪ್ಗಳನ್ನು ಸರಿಪಡಿಸಲಾಗಿದ್ದು, ಶೀಘ್ರದಲ್ಲೇ ಸಾಮಾನ್ಯ ನೀರು ಸರಬರಾಜು ಪುನರಾರಂಭವಾಗಲಿದೆ ಎಂದು ಮಂಜುನಾಥ್ ಹೇಳಿದರು.
ಕುಡಿಯುವ ನೀರಿನ ಪೈಪ್ಲೈನ್ಗಳಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎಚ್ಎಎಲ್ ವಾರ್ಡ್ನ ಅನ್ನಸಂದ್ರ ಪಾಳ್ಯದಲ್ಲಿ ನೂರಾರು ಮನೆಗಳ ನಲ್ಲಿಗಳಲ್ಲಿ ದುರ್ವಾಸನೆ ನೀರು ಬರುತ್ತಿತ್ತು. ಸಮಸ್ಯೆಯನ್ನು ಗುರುತಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಿಡಬ್ಲ್ಯುಎಸ್ಎಸ್ಬಿ ಎಂಜಿನಿಯರ್ ಭರವಸೆ ನೀಡಿದ್ದಾರೆ.
Advertisement