ಬೆಂಗಳೂರು: ಬತ್ತಿಹೋದ ಬೋರ್ ವೆಲ್, ATM ಗಳಲ್ಲೂ ನೀರಿಲ್ಲ; ಮಳೆ ಬಿದ್ದರೂ ತೀರದ ಸಮಸ್ಯೆ!

ಬೆಂಗಳೂರಿನಲ್ಲಿ ನೀರಿನ ಅಭಾವ ಮುಂದುವರಿದಿದ್ದು, ನಗರದ ಹಲವೆಡೆ ನೀರಿಲ್ಲದೆ ಜನರು ತೀವ್ರ ಸಂಕಷ್ಟ ಪಡುವಂತಾಗಿದೆ. ಬೆಂಗಳೂರು ದಕ್ಷಿಣದ ಇಲ್ಯಾಸ್ ನಗರ ಮತ್ತು ಸಮೀಪದ ಪ್ರದೇಶಗಳ ನಿವಾಸಿಗಳು ಮತ್ತೊಂದು ಸವಾಲನ್ನು ಎದುರಿಸುತ್ತಿದ್ದಾರೆ.
ನೀರಿನ ಎಟಿಎಂಗಳು
ನೀರಿನ ಎಟಿಎಂಗಳು
Updated on

ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಅಭಾವ ಮುಂದುವರಿದಿದ್ದು, ನಗರದ ಹಲವೆಡೆ ನೀರಿಲ್ಲದೆ ಜನರು ತೀವ್ರ ಸಂಕಷ್ಟ ಪಡುವಂತಾಗಿದೆ. ಬೆಂಗಳೂರು ದಕ್ಷಿಣದ ಇಲ್ಯಾಸ್ ನಗರ ಮತ್ತು ಸಮೀಪದ ಪ್ರದೇಶಗಳ ನಿವಾಸಿಗಳು ಮತ್ತೊಂದು ಸವಾಲನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಬಿಬಿಎಂಪಿಯು ನಡೆಸುತ್ತಿರುವ 5 ರೂ. ಆರ್‌ಒ ವಾಟರ್ ಎಟಿಎಂಗಳು ಪ್ರತಿದಿನ ನೀರು ಕೊಡುವಲ್ಲಿ ವಿಫಲವಾಗಿವೆ. ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ ಮೂರು ನೀರಿನ ಎಟಿಎಂಗಳಿದ್ದು, ಅವು ದಿನವಿಡೀ ನೀರನ್ನು ನೀಡಲು ವಿಫಲವಾಗಿವೆ.

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಇಲ್ಯಾಸ್ ನಗರದ ನಿವಾಸಿ ಮೊಹಮ್ಮದ್ ಸಲೀಂ ಅವರ ಐದು ಜನರ ಕುಟುಂಬಕ್ಕೆ ಕುಡಿಯಲು ಮತ್ತು ಅಡುಗೆ ಉದ್ದೇಶಗಳಿಗಾಗಿ ದಿನಕ್ಕೆ ಒಂದು ಕ್ಯಾನ್ ನೀರಿನ ಅಗತ್ಯವಿದೆ. “ಕಳೆದ ಒಂದು ವಾರದಿಂದ, ಮೂರು ನಾಲ್ಕು ನೀರಿನ ಎಟಿಎಂಗಳು ಕೊರತೆ ಎದುರಿಸುತ್ತಿವೆ. ‘ನೀರಿನ ಸಂಗ್ರಹ ಇಲ್ಲ ಮತ್ತು ಮಧ್ಯಾಹ್ನ 1.30ಕ್ಕೆ ನೀರು ಲಭ್ಯವಾಗಲಿದೆ ಎಂಬ ಬೋರ್ಡ್‌ನೊಂದಿಗೆ ನಿವಾಸಿಗಳನ್ನು ಸ್ವಾಗತಿಸಲಾಗುತ್ತದೆ. ಆದರೆ, ನೀರು ತರಲು ಬಂದವರು ಬೋರ್ಡು ಕಂಡರೆ ನೀರು ಸಿಗುತ್ತಿಲ್ಲ.

ಬೇಸಿಗೆಯ ಬಿಸಿಯಿಂದಾಗಿ ನೀರಿನ ಬವಣೆ ಕುಸಿದಿದ್ದು, ಬೋರ್‌ವೆಲ್‌ನಿಂದ ಟ್ಯಾಂಕ್‌ಗೆ ನೀರು ಹರಿಸುತ್ತಿಲ್ಲ ಎಂದು ನಿರ್ವಾಹಕರೊಬ್ಬರು ತಿಳಿಸಿದರು. 25 ಲೀಟರ್ ನೀರಿಗೆ 5 ರೂಪಾಯಿ ಕೊಟ್ಟು ಶೇ.70ರಷ್ಟು ನೀರು ಮಾತ್ರ ಪಡೆಯುತ್ತಿದ್ದಾರೆ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಕೆ. ಹೇಳಿದರು. ಕೆಲವು 24-ಗಂಟೆಗಳ ನೀರು ತುಂಬುವ ಕೇಂದ್ರಗಳು ರಾತ್ರಿ 9 ಕ್ಕಿಂತ ಮೊದಲು ಮುಚ್ಚಲ್ಪಡುತ್ತವೆ. ಕೆಲವರು ಐದಾರು ನೀರಿನ ಕ್ಯಾನ್ ಗಳೊಂದಿಗೆ ಬರುವುದರಿಂದ ಕೆಲವರಿಗೆ ತೊಂದರೆಯಾಗುತ್ತದೆ. ನಿರ್ವಾಹಕರು ಪ್ರತಿ ವ್ಯಕ್ತಿಗೆ ಒಂದು ಅಥವಾ ಎರಡು ಕ್ಯಾನ್‌ಗಳನ್ನು ಕಡ್ಡಾಯಗೊಳಿಸಬೇಕು, ಏಕೆಂದರೆ ಜನರು ಸಾಲಿನಲ್ಲಿ ದೀರ್ಘಕಾಲ ನಿಲ್ಲಬೇಕಾಗುತ್ತದೆ ಎಂದು ಅವರು ಹೇಳಿದರು.

ನೀರಿನ ಎಟಿಎಂಗಳು
ಕಾವೇರಿ ಮೇಲಿನ ಒತ್ತಡ ಇಳಿಸಲು ಕ್ರಮ: ಪ್ರತಿದಿನ ಕೋಟಿ ಲೀಟರ್‌ ಸಂಸ್ಕರಿತ ನೀರು ಉತ್ಪಾದನೆಗೆ BWSSB ಮುಂದು!

ಬಿಬಿಎಂಪಿ ಮುಖ್ಯ ಇಂಜಿನಿಯರ್ (ದಕ್ಷಿಣ ವಲಯ) ಮಾತನಾಡಿ, ಈ ಬಾರಿಯ ಬೇಸಿಗೆಯಲ್ಲಿ ವಿಪರೀತ ಸೆಖೆಯಿಂದ ನಗರದ ಕೆಲವು ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿದ್ದು, ಎಟಿಎಂಗಳಲ್ಲಿ ನೀರಿಲ್ಲ. ಬೋರ್‌ವೆಲ್‌ಗಳಿಗೆ ತಾತ್ಕಾಲಿಕವಾಗಿ ನೀರು ತುಂಬಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಪ್ರಯತ್ನಿಸುತ್ತಿದೆ, ಇದರಿಂದ ಸಾರ್ವಜನಿಕರಿಗೆ ನೀರು ಸಿಗುತ್ತದೆ. ಮಳೆ ಬಂದರೆ ಬತ್ತಿದ ಬೋರ್‌ವೆಲ್‌ಗಳು ಮತ್ತೆ ಕೆಲಸ ಮಾಡಲಿವೆ ಎಂದರು. ಜಂಟಿ ಆಯುಕ್ತ ಎಚ್‌ಆರ್‌ ಶಿವಕುಮಾರ್‌ ಮಾತನಾಡಿ, ಸಮಸ್ಯೆಯ ಕುರಿತು ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com